ಮಾಧ್ಯಮಗಳಿಗೆ ಕಾಣದಂತೆ ನಮಾಜ್ ಮಾಡಿದ ಜಮೀರ್
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಕ್ರೀದ್ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿದ್ದಾರೆ.
ಮಧ್ಯಮಗಳಿಗೆ ಕಾಣದಂತೆ ಜಮೀರ್ ಅಹ್ಮದ್ ನಮಾಜ್ ನಲ್ಲಿ ಭಾಗಿಯಾಗಿದ್ದಾರೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಜಮೀರ್ ತಮ್ಮ ಮಗ ಜೈದ್ ಅಹ್ಮದ್ ಖಾನ್ ಜೊತೆ ಜನರ ಮಧ್ಯೆ ಕುಳಿತು ನಮಾಜ್ ಮಾಡಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರಂತದ ಹಿನ್ನೆಲೆಯಲ್ಲಿ ಜಮೀರ್ ನಮಾಜ್ ವೇದಿಕೆಗೆ ಬಂದಿಲ್ಲ. ರಸ್ತೆಯಲ್ಲೇ ಕುಳಿತು ನಮಾಜ್ ಮಾಡಿ ಹೋಗಿದ್ದಾರೆ.