ಹೆಲ್ಮೆಟ್ ಹಾಕಿಕೊಳ್ಳದೆ ಬೈಕ್ ಓಡಿಸಿದ ವ್ಯಕ್ತಿಯನ್ನು ತಡೆದಿದ್ದಕ್ಕೆ ಸವಾರ ಮಹಿಳಾ ಪಿಎಸ್ ಐ ಮೇಲೆ ದರ್ಪ ತೋರಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಮಹದೇವನಕಟ್ಟೆ ಗ್ರಾಮದ ಹಾಲೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಹಾಲೇಶ್ ಗ್ರಾಪಂ ಮಾಜಿ ಅಅಧ್ಯಕ್ಷ ಎನ್ನಲಾಗಿದೆ. ಫೈನ್ ಹಾಕದಂತೆ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ಹಾಲೇಶ್ ನನ್ನು ಹಿಡಿದ ಪಿಎಸ್ ಐ ಬಸವರಾಜ್, ಕೇಸ್ ಹಾಕಲು ಠಾಣೆಗೆ ಕರೆದೊಯ್ದಿದ್ದಾರೆ. ಹಾಲೇಶ್ ವರ್ತನೆ ಕಂಡು ಕತ್ತಿನ ಪಟ್ಟಿ ಹಿಡಿದು ಪೊಲೀಸರು ಎಳೆದುಕೊಂಡು ಹೋಗಿದ್ದಾರೆ. ಪೊಲೀಸರ ಬಳಿ ಕ್ಷಮ ಕೇಳಿ ಕೇಸ್ ಹಾಕದಂತೆ ಹಾಲೇಶ್ ನ ಸ್ನೇಹಿತರು ಮನವಿ ಮಾಡಿದ್ದಾರೆ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಕ್ರಾಸ್ ಹತ್ತಿರ ಈ ಘಟನೆ ನಡೆದಿದೆ.