ದಾವಣಗೆರೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಮತ್ತೊಮ್ಮೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಸ್ವಯಂ ಘೋಷಿತ ನಕಲಿ ಹಿಂದೂ ಹುಲಿ. ಆತ ಹಿಂದೂ ಪ್ರತಿಪಾದಕನಾಗಿದ್ದರೆ, ಜೆಡಿಎಸ್ ಗೆ ಯಾಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಗೋಪಾಲ್ ಜೀ ಅವರನ್ನು ಯಾಕೆ ಟೀಕಿಸುತ್ತಿದ್ದ? ಅವನು ಟಿಪ್ಪೂ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದು, ಟೋಪಿ ಧರಿಸಿ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಬಿರಿಯಾನಿ ತಿಂದಿರುವ ಫೋಟೋಗಳು ನಮ್ಮ ಬಳಿ ಇವೆ. ಆತ ಈಗ ಹಿಂದೂ ಹುಲಿ ಎಂದು ನಾಟಕವಾಡುತ್ತಿದ್ದಾನೆ ಎಂದು ಗುಡುಗಿದ್ದಾರೆ.