ಸರ್ಕಾರದ ವಿರುದ್ಧ ಧ್ವನಿ ಎತ್ತುವ ಧೈರ್ಯ ನಮ್ಮ ಸಿನಿ ತಾರೆಯರಲ್ಲಿಲ್ಲ ಅಂತಾ ಖ್ಯಾತ ಬಾಲಿವುಡ್ ಚಿತ್ರಬರಹಗಾರ, ಸಾಹಿತಿ ಜಾವೆದ್ ಅಖ್ತರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಭಾರತದ ಸಿನಿ ತಾರೆಯರಲ್ಲಿ ಸರ್ಕಾರ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಇದಕ್ಕೆ ಮೂಲ ಕಾರಣ, ತಾವೆಲ್ಲಿ ಸರ್ಕಾರದ ವಿರುದ್ಧ ಮಾತನಾಡಿದರೆ ಇಡಿ, ಐಟಿ, ಸಿಬಿಐ ದಾಳಿಯಾಗುತ್ತೋ ಎನ್ನುವ ಆತಂಕ ಕಾಡುತ್ತಿದೆ.
ಹೀಗಾಗಿ ಯಾವೊಬ್ಬ ತಾರೆಯೂ ಸರ್ಕಾರದ ಯಾವೊಂದು ನಿರ್ಧಾರವನ್ನೂ ಟೀಕಿಸುವ ಇಲ್ಲಾ ಪ್ರಶ್ನಿಸುವ ತಾಕತ್ತು ತೋರುತ್ತಿಲ್ಲ ಅಂತಾ ದೂರಿದ್ದಾರೆ. 80 ವರ್ಷದ ಈ ಖ್ಯಾತ ಚಿತ್ರ ಸಾಹಿತಿ, ಅಮೆರಿಕದ ಮೆರಿಲ್ ಸ್ಟ್ರೀಪ್ ಇತ್ತೀಚೆಗೆ ಟ್ರಂಪ್ ಆಡಳಿತವನ್ನು ಕುಟುಕಿದ್ದನ್ನು ಪ್ರಸ್ತಾಪಿಸಿದ್ದು, ಆ ತಾರೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಅಂತಲೂ ಉಲ್ಲೇಖಿಸಿದ್ದಾರೆ.
ಹಾಗಂತಾ ಭಾರತದಲ್ಲಿ ಈ ವಾತಾವರಣವಿದೆ ಅಂತಾ ನನಗೆ ಅನಿಸುತ್ತಿಲ್ಲ ಎಂದಿದ್ದಾರೆ. ಖ್ಯಾತ ವಕೀಲ ಕಪಿಲ್ ಸಿಬಲ್ ಜೊತೆ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ಜಾವೆದ್ ಅಖ್ತರ್, ನಾನು ಹೀಗೆ ಟೀಕೆಸದೆ ಉಳಿಯುವ ವರ್ಗದಿಂದ ಹೊರತಾಗಿದ್ದೇನೆ ಅಂತಾ ಸ್ಪಷ್ಟಪಡಿಸಿದ್ದಾರೆ.