ಮೊದಲಿನಿಂದಲೂ ಕೂಡ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಅಷ್ಟಕ್ಕಷ್ಟೇ,. ಏನೇ ಯುದ್ಧ, ಏನೇ ಜಗಳ ಆಗಿದ್ದರೂ ಕೂಡ ಭಾರತ ಹಾಗೂ ಪಾಕಿಸ್ತಾನದ ನಡುವೆ ವ್ಯಾಪಾರ ವಹಿವಾಟುಗಳು ಮಾತ್ರ ನಡೆಯುತ್ತಲೇ ಇತ್ತು. ಆದರೆ, ಇದೀಗ ಜಮ್ಮು ಕಾಶ್ಮೀರದ ಪಹಲ್ ಗಾಮ್ ನಲ್ಲಿ ಪಾಕ್ ಉಗ್ರರು ಕಾಶ್ಮೀರಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು.
ಆ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ 26 ಮಂದಿ ಸಾವನಪ್ಪಿದ್ದಾರೆ. ಈ ಉಗ್ರರ ಕೃತ್ಯಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಆ ಉಗ್ರರನ್ನು ಸೆದೆ ಬಡಿಯುವಂತೆ ಎಲ್ಲೆಡೆ ಪ್ರತಿಭಟನೆಯನ್ನ ಕೂಡ ನಡೆಸಲಾಗುತ್ತಿದೆ.. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪಾಕಿಸ್ತಾನದ ವಿರುದ್ಧ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಅಟ್ಟಾರಿ-ವಾಘಾ ಗಡಿಯನ್ನ ಶಾಶ್ವತವಾಗಿ ಮುಚ್ಚಲು, ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ ನಿಷೇಧ. ಪಾಕಿಸ್ತಾನಿ ಪ್ರಜೆಗಳ ವಿಸಾ ರದ್ದಿಗೆ ನಿರ್ಧಾರ. ಹೀಗೆ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖ ನಿರ್ಧಾರ ಏನೆಂದರೆ, ಸಿಂಧೂ ನದಿ ಒಪ್ಪಂದ.ಈ ಸಿಂಧೂ ನದಿಯಿಂದ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಹರಿಯದಂತೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಪಾಕ್ಗೆ ದೊಡ್ಡ ಪೆಟ್ಟು ಬಿದ್ದಿದೆ. ಪಾಕ್ ಗೆ ಎಲ್ಲದಕ್ಕೂ ಈ ನೀರೇ ಆಸರೆಯಾಗಿತ್ತು. ಆದರೆ ಇದೀಗ ಇದನ್ನೇ ಭಾರತ ಸರ್ಕಾರ ನಿಲ್ಲಿಸಿದೆ.
ಭಾರತ ಸರ್ಕಾರದ ಈ ನಿರ್ಧಾರಕ್ಕೆ ಪಾಕ್ ಸರ್ಕಾರ ಕೆಂಡಕಾರುತ್ತಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಭಾರತದ ಈ ಕ್ರಮವನ್ನು ಟೀಕಿಸಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ-ಜರ್ದಾರಿ, ಸಿಂಧೂ ನಮ್ಮದು ಮತ್ತು ಅದು ನಮ್ಮದೇ ಆಗಿರುತ್ತದೆ. ನೀರು ಬಿಟ್ಟರೇ ಸರಿ ಇಲ್ಲದಿದ್ದರೆ ನಿಮ್ಮ ರಕ್ತ ಹರಿಯುತ್ತದೆ ಎನ್ನುವ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. ಮೋದಿಯವರು, ಭುಟ್ಟೋ-ಜರ್ದಾರಿ ಯವರ ಮಾತನ್ನ ಯಾವ ರೀತಿ ಪರಿಗಣಿಸ್ತಾರೆ, ಮುಂದಿನ ದಿನಗಳಲ್ಲಿ ಭುಟ್ಟೋ-ಜರ್ದಾರಿಯ ಮಾತು ಯುದ್ಧಕ್ಕೆ ಕಾರಣ ಆಗುತ್ತಾ ಅಂತಾ ಕಾದುನೋಡಬೇಕಾಗಿದೆ..