ಬೀದರ್: ನಗರದಲ್ಲಿ ಜ.16ರಂದು ನಡೆದ ಎಟಿಎಂ ಸಿಬ್ಬಂದಿ ಹತ್ಯೆ ಮತ್ತು ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ದರೋಡೆ ಪ್ರಕರಣ ನಡೆದು 91 ದಿನ ಕಳೆದರೂ ಗಾಯಾಳುವಿಗೆ ನಯಾಪೈಸೆ ಆರ್ಥಿಕ ಸಹಾಯವನ್ನು ಜಿಲ್ಲಾಡಳಿತ ನೀಡಿಲ್ಲ.
ಆರ್ಥಿಕ ಸಹಾಯ ಮತ್ತು ಉದ್ಯೋಗಕ್ಕಾಗಿ ಶಿವಕುಮಾರ್ ಕುಟುಂಬ ಪರಿಪರಿಯಾಗಿ ಬೇಡಿಕೊಳ್ಳುತ್ತಿದೆ. ಆರ್ಥಿಕ ಸಹಾಯ ದೊರೆಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಭೇಟಿಗೆ ಕುಟುಂಬ ಮುಂದಾಗಿದೆ. ಆರ್ಥಿಕ ಸಹಾಯ ಮತ್ತು ಉದ್ಯೋಗಕ್ಕಾಗಿ ಮುಖ್ಯಮಂತ್ರಿಗಳಿಗೆ ಶಿವಕುಮಾರ್ ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ.
ಆರ್ಥಿಕ ಸಹಾಯಕ್ಕಾಗಿ ಕಳೆದ 3 ತಿಂಗಳಿಂದ ಮನವಿ ಮಾಡಿಕೊಂಡರೂ ಸಚಿವರು, ಜಿಲ್ಲಾಡಳಿತ ಡೋಂಟ್ಕೇರ್ ಎನ್ನುತ್ತಿದೆ. ಎಟಿಎಂ ದರೋಡೆ ಪ್ರಕರಣದಲ್ಲಿ ಗಾಯಗೊಂಡಿದ್ದ ಶಿವಕುಮಾರ್ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.