ದಾವಣಗೆರೆ : ಬಿಜೆಪಿ ಆಂತರಿಕ ಗೊಂದಲದ ಬಗ್ಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸತ್ತ ಮೇಲೆ ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಗಬಹುದು. ಚುನಾವಣೆ ಬಂದ ನಂತರ ಬನ್ನಿ ಎಲ್ಲವೂ ಸರಿ ಹೋಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ರೇಣುಕಾಚಾರ್ಯ ಒಳ ಒಪ್ಪಂದ ಮಾಡಿಕೊಂಡಿದ್ದರೆಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಿಗೆ ನಿಮ್ಮ ವರದಿ ತೋರಿಸಿ ಏನು ಕ್ರಮ ಕೈಗೊಳ್ತಾರೆ ನೋಡೋಣ ಎಂದು ಪ್ರಶ್ನಿಸಿದ್ದಾರೆ.
ನಮಗೆ ಬಸವರಾಜ್ ಶಿವಗಂಗಾ ಸಂಬಂಧ ಇಲ್ಲ. ನಾನು ವರ್ಷದಲ್ಲಿ ಒಂದು ಸಾರಿ ಚನ್ನಗಿರಿಯಲ್ಲಿ ಭೇಟಿಯಾಗಿದ್ದೆ. ಅದನ್ನ ಬಿಟ್ಟು ನಮ್ಮ ಮನೆಯಲ್ಲಿನ ಮದುವೆಗೆ ಕರೆದಿದ್ದೆ ಅಷ್ಟೆ. ನಮ್ಮಲ್ಲಿ ಯಾವುದೇ ರೀತಿ ಬಣ ಇಲ್ಲ. ನಾವೇ ವರ್ಜಿನಲ್ ಬಿಜೆಪಿ. ನಾನೇನು ಕೆಜಿಪಿ ಕಟ್ಟಿಲ್ಲ. ಬ್ರೀಗೆಡ್ ಕಟ್ಟಿಲ್ಲ. ಐ ಆಮ್ ಪ್ಯೂರ್ ಬಿಜೆಪಿ ಎಂದು ಹೇಳಿದ್ದಾರೆ.