ಆಪರೇಷನ್ ಸಿಂಧೂರ್…ಇದೊಂದು ಇದೊಂದೇ…. ಹೆಸರು ಕೇಳಿದರೆ ಸಾಕು ಪಾಕಿಸ್ತಾನವೀಗ ಕೊರೆಯುವ ಚಳಿಯಲ್ಲೂ ಪತರಗುಟ್ಟಿ ಬೆವರುತ್ತಿದೆ. ಹೌದು, ಪಹಲ್ಗಾಮ್ ನಲ್ಲಿ 26 ಪ್ರವಾಸಿಗರ ಹತ್ಯೆ ಬಳಿಕ ಪ್ರತೀಕಾರಕ್ಕೆ ಮುಂದಾಗಿದ್ದ ಭಾರತ ಉಗ್ರವಾದದ ತವರು ಪಾಕಿಸ್ತಾನವನ್ನು ಇನ್ನೆಂದಿಗೂ ಮೇಲೇಳದಂತೆ ಬಗ್ಗು ಬಡಿಯುವ ಶಪಥ ಮಾಡಿತ್ತು. ಇತಿಹಾಸದಲ್ಲೇ ಮೊದಲ ಬಾರಿ ಪಾಕ್ ನ ಇಸ್ಲಾಮಾಬಾದ್, ಲಾಹೋರ್, ಕರಾಚಿ, ರಾವಲ್ಪಿಂಡಿಗೆ ನುಗ್ಗಿ ಹೊಡೆಯಲಾಗಿತ್ತು. ಅಷ್ಟೇ….. ಪಾಕ್ ವಿಲವಿಲ ಒದ್ದಾಡುತ್ತಲೇ ಸರ್ವನಾಶದಿಂದ ಬಚಾವ್ ಮಾಡುವಂತೆ ಅಮೆರಿಕದ ಕಾಲಿಗೆರಗಿತ್ತು.
ಅಣ್ವಸ್ತ್ರ ಸಮರದ ತಯಾರಿ ಆರಂಭಿಸಿತ್ತಾ ಪಾಕಿಸ್ತಾನ…?
ಯಾವಾಗ ಭಾರತ ಮನೆಯೊಳಗೆ ನುಗ್ಗಿ ರಣಬೇಟೆ ಆಡೋಕೆ ಶುರುಮಾಡುತ್ತ ಪಾಪರ್ ಪಾಕ್ ಸಾವು ಬದುಕಿನ ನಡುವಿನ ರೋಗಿಯಂತೆ ವೆಂಟಿಲೇಟರ್ ಸೇರಿಬಿಟ್ಟಿತು. ಅದರಲ್ಲೂ ಪಾಕ್ ಸೇನಾ ನೆಲೆಯ ಹೆಡ್ ಆಫೀಸ್ ಇರುವ ರಾವಲ್ಪಿಂಡಿಯಲ್ಲೇ ಯಾವಾಗ ಬಾಂಬ್ ಸ್ಫೋಟಿಸಿತೋ ಪಾಕ್ ಕಂಗಾಲಾಗಿಬಿಡ್ತು. ಪಾಕ್ ಸೇನಾ ಮುಖ್ಯಸ್ಥ ಮುನೀರ್ ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲೇ ಸ್ಫೋಟ ಘಟಿಸಿತ್ತು.
ಅಷ್ಟೇ ಅಲ್ಲಾ ಪಾಕ್ ನ ಅಣ್ವಸ್ತ್ರ ಕಮಾಂಡ್ ಸೆಂಟರ್ ಸನಿಹದಲ್ಲೇ ಈ ದಾಳಿ ಆಗಿತ್ತು. ಇದರ ನಡುವೆ ಪಾಕ್ ಅಣ್ವಸ್ತ್ರ ಸಂಗ್ರಹಿಸಿಟ್ಟಿರುವ ಸರ್ಗೋದಾದ ಕಿರಾನಾ ಬೆಟ್ಟ ಭಾರತದ ನೆಕ್ಸ್ಟ್ ಟಾರ್ಗೆಟ್ ಆಗಿತ್ತು. ಇದನ್ನರಿತ ಅಮೆರಿಕ ಮುಂದಾಗೋ ದೊಡ್ಡ ಅನಾಹುತವನ್ನು ತಪ್ಪಿಸೋ ನಿಟ್ಟಿನಲ್ಲಿ ಭಾರತದ ಪ್ರಧಾನಿಗೆ ಕರೆ ಮಾಡಿತ್ತು.
ಕಿರಾನಾ ಅಣ್ವಸ್ತ್ರಗಾರ ನಿರ್ಮಾಣಕ್ಕೆ ಅಮೆರಿಕ ನೆರವು
ಕಿರಾನಾ ಬೆಟ್ಟದಲ್ಲಿರುವ ಪಾಕ್ ಅಣ್ವಸ್ತ್ರಗಾರ ನಿರ್ಮಾಣಕ್ಕೆ ಖುದ್ದು ಅಮೆರಿಕ ನೆರವು ನೀಡಿತ್ತು. ಈ ಜಾಗವೇ ಭಾರತದ ಮುಂದಿನ ಟಾರ್ಗೆಟ್ ಎನ್ನುವುದು ಹಿರಿಯಣ್ಣನಿಗೂ ಅರಿವಾಗಿತ್ತು. ಇದರ ನಡುವೆ ಪಾಕಿಸ್ತಾನ ತನ್ನ ಬತ್ತಳಿಕೆಯ ಕಟ್ಟ ಕಡೆಯ ಅಸ್ತ್ರ ಅಣ್ವಸ್ತ್ರವನ್ನು ಭಾರತದ ಮೇಲೆ ಪ್ರಯೋಗಿಸಲು ಚಿಂತನೆ ಆರಂಭಿಸಿತ್ತು.
ಇದಕ್ಕಾಗಿ ಕಮಾಂಡ್ ಕಂಟ್ರೋಲ್ ಸಭೆಗೂ ಪ್ಲ್ಯಾನಿಂಗ್ ಶುರುವಾಗಿತ್ತು. ಅಣ್ವಸ್ತ್ರ ಸಾಗಣೆ ಚಟುವಟಿಕೆಗಳೂ ಪಾಕ್ ನಲ್ಲಿ ಆರಂಭವಾಗಿದ್ವು. ಈ ಮಾಹಿತಿ ಭಾರತೀಯ ಗುಪ್ತಚರ ವಿಭಾಗದ ಮೂಲಕ ದೆಹಲಿ ತಲುಪಿತ್ತು. ಇದೇ ಸಂದರ್ಭದಲ್ಲೇ ಖುದ್ದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಧಾನಿ ಮೋದಿಗೆ ಕರೆ ಮಾಡಿದ್ದರು.
ಯುದ್ಧ ಸಾಕು ಅನ್ನೋ ವಿಚಾರವನ್ನು ಮನವರಿಕೆ ಮಾಡಿದರು. ಪರಮಾಣು ಯುದ್ಧದ ಅಪಾಯದ ಮುನ್ಸೂಚನೆ ನೀಡುವ ಮೂಲಕ ಎರಡು ದೇಶಗಳ ನಡುವಿನ ಕದನಕ್ಕೆ ಅಮೆರಿಕ ಪೂರ್ಣವಿರಾಮವಿಡಿಸಿತ್ತು. ಬಟ್, ಪಾಕ್ ವಿರುದ್ಧ ಸಮರ ನಿಲ್ಲಿಸೋ ಇರಾದೆ ತೋರದ ಮೋದಿ ಅಂತಿಮವಾಗಿ ಅಮೆರಿಕ ಉಪಾಧ್ಯಕ್ಷರ ಮನವೊಲಿಕೆ ನಂತ್ರವೇ ತಮ್ಮ ನಿಲುವನ್ನು ಬದಲಿಸಿದ್ರು ಎನಲಾಗ್ತಿದೆ.
ಏನೇ ಆಗ್ಲಿ, ಸಾಮೂಹಿಕ ನಾಶದ ಅಣ್ವಸ್ತ್ರ ಪ್ರಯೋಗದ ಚಿಂತನೆ ನಡೆಸಿದ್ದ ಪಾಕ್ ಗೆ ಅಮೆರಿಕ ಮೂಗುದಾರ ಹಾಕಿದೆ. ಇದರ ನಡುವೆ, ಸರ್ವನಾಸದ ಹೆಬ್ಬಾಗಿಲಿಗೆ ಬಂದು ನಿಂತಿದ್ದ ಪಾಕ್ ಅಮೆರಿಕ ಮಧ್ಯಸ್ಥಿಕೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದ್ರೆ ಪಹಲ್ಗಾಮ್ ದಾಳಿಕೋರರ ಅಂತ್ಯವಾಗೋವರೆಂಗೂ ಹಿಂದೂಸ್ತಾನಿಗಳ ಪ್ರತೀಕಾರ ಶಮನಾವಾಗುವುದಿಲ್ಲ.