ದೂರದ ಸ್ವಿಜರ್ ಲೆಂಡ್ ಗೆ ಹೋಗಬೇಕಿಲ್ಲ. ಭಾರತದ ಮುಕುಟಮಣಿ ಅಂತಲೇ ಕರೆಸಿಕೊಳ್ಳುವ ಕಾಶ್ಮೀರದಲ್ಲೇ ಭೂಲೋಕದ ಸ್ವರ್ಗವೊಂದು ತಣ್ಣಗೆ ಮಲಗಿದೆ. ಅದೆಷ್ಟೋ ಸಿನಿಮಾಗಳ ರೊಮ್ಯಾಂಟಿಕ್ ಹಾಡುಗಳಿಗೆ ಈ ತಾಣ ಸಾಕ್ಷಿಯಾಗಿದೆ. ಲಕ್ಷಾಂತರ ಪ್ರವಾಸಿಗರು ಇಲ್ಲಿನ ಪ್ರಕೃತಿ ಸಿರಿಯನ್ನ ಕಣ್ತುಂಬಿಕೊಂಡಿದ್ದಾರೆ. ಆದ್ರೆ ಇಂಥಾ ಸುಪ್ರಸಿದ್ಧ ತಾಣವಿಂದು ಉಗ್ರರ ಹುಚ್ಚಾಟಕ್ಕೆ ರಕ್ತಸಿಕ್ತವಾಗಿ ಹೋಗಿದೆ. ಈ ನರಮೇಧದ ಹಿಂದಿನ ಕೈಗಳು ಯಾರದ್ದು ಅನ್ನೋ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.
ಹಫೀಜ್ ಸಯೀದ್ ನ ಬಂಟನಿಂದ ನೀಲನಕ್ಷೆ
ಪಹಲ್ಗಾವ್ ಹತ್ಯಾಕಾಂಡದ ಹಿಂದೆ ನರರಾಕ್ಷಸ ಹಫೀಜ್ ಸಯೀದ್ ನ ಬಂಟನ ನೆರಳು ಪ್ರತ್ಯಕ್ಷವಾಗಿದೆ. 26 ಜನರ ಉಸಿರು ನಿಲ್ಲಿಸಿದ ಕುಕೃತ್ಯದ ಹಿಂದೆ ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಸೈಪುಲ್ಲಾ ಖಾಲಿದ್ ನ ಕೈವಾಡ ರುಜುವಾತಾಗಿದೆ. ಪಾಪಿ ಪಾಪಿಸ್ಥಾನದ ನೆರವಿನಿಂದಲೇ ಖಾಲಿದ್ ಈ ಸಂಚು ರೂಪಿಸಿದ್ದ ಅನ್ನೋದೀಗ ಜಗಜ್ಜಾಹೀರಾಗಿದೆ. ಈ ಹಿಂದೆ ಭಾರತದಲ್ಲಿ ನಡೆದ ಅದೆಷ್ಟೋ ಉಗ್ರರ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಕೂಡಾ ಇದೇ ಖಾಲಿದ್.
ದಾಳಿಗು ಮುನ್ನ ಪಾಕಿಸ್ಥಾನಿ ಸೇನೆ ಜೊತೆ ಚರ್ಚೆ
ಪಹಲ್ಗಾಮ್ ದಾಳಿಗೆ ಕರೆಕ್ಟಾಗಿ ಒಂದು ತಿಂಗಳ ಹಿಂದಷ್ಟೇ ಪಾಕಿಸ್ತಾನದ ಪಂಜಾಬ್ನ ಕಂಗನ್ಪುರಕ್ಕೆ ಭೇಟಿ ನೀಡಿದ್ದ. ಅಷ್ಟೇ ಅಲ್ಲಾ ಇಲ್ಲೇ ಇರೋ ಪಾಕಿಸ್ತಾನ ಸೇನೆಯ ಅತಿ ದೊಡ್ಡ ಬೆಟಾಲಿಯನ್ ಜೊತೆ ಚರ್ಚೆ ಕೂಡಾ ನಡೆಸಿದ್ದ. ಹಾಗೆ ನೋಡಿದ್ರೆ ಪಾಕಿಸ್ತಾನ ಸೇನೆಗೆ ಈ ಖಾಲಿದ್ ಬಲು ಅಚ್ಚು ಮೆಚ್ಚು. ಯೋಧರಿಗೆ ಪ್ರೇರಣೆ ನೀಡುವಂಥಾ ಭಾಷಣಗಳನ್ನು ಮಾಡೋ ಈ ಖಾಲಿದ್ ಸೈನಿಕರ ಪಾಲಿನ ದೊಡ್ಡ ಪ್ರೇರಣೆ. ಇದೇ ಖಾಲಿದ್ ಮೊನ್ನೆ ಯೋಧರೊಟ್ಟಿಗೆ ಕಾಶ್ಮೀರ ಕೈವಶದ ಬಗ್ಗೆ ಚರ್ಚೆ ನಡೆಸಿದ್ದ. ಇದರ ಒಂದು ತಿಂಗಳ ಅವಧಿಯಲ್ಲೇ ಈಗ ಪಹಲ್ಗಾಮ್ ದಾಳಿ ನಡೆದಿದೆ.
ಕಾಶ್ಮೀರ ಕೈವಶಕ್ಕೆ ಖಾಲಿದ್ ಡೆಡ್ ಲೈನ್
ಪಹಲ್ಗಾಮ್ ದಾಳಿಯ ನೀಲನಕ್ಷೆ ರೂಪಿಸಿದ್ದೇ ಈ ಖಾಲಿದ್. ಭಾರತದ ವಿರುದ್ಧ ಹಗೆಯ ವಿಷಕಾರೋ ಜಿಹಾದಿ ಕಾಶ್ಮೀರ ಕೈವಶ ಮಾಡಿಕೊಂಡೇ ಸಿದ್ಧ ಅಂತಾ ಶರಾ ಬರೆದಿದ್ದ. ಅವತ್ತು ಫೆಬ್ರವರಿ 2…ಪಾಕಿಸ್ಥಾನದ ಸೇನಾ ಕ್ಯಾಂಪ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಖಾಲಿದ್ 370ನೇ ವಿಧಿ ರದ್ದು ಬೆನ್ನಲ್ಲೇ ಸ್ವತಂತ್ರ ಕಾಶ್ಮೀರದ ಮಾತುಗಳನ್ನಾಡಿದ್ದ. ಸರಿಯಾಗಿ ನೆನಪಿಟ್ಟುಕೊಳ್ಳಿ ಇವತ್ತು ಫೆಬ್ರವರಿ 26, ಮುಂದಿನ ವರ್ಷ ಇದೇ 26ರಂದು ಕಾಶ್ಮೀರ ಪಾಕಿಸ್ಥಾನದ ಭಾಗವಾಗಿರುತ್ತೆ ಅಂತಾ ಘೋಷಿಸಿದ್ದ. ಕಾಶ್ಮೀರ ಕೈವಶಕ್ಕೆ ಕ್ಷಣಗಣನೆ ಆರಂಭವಾಗಿದೆ, ರಕ್ತಸಿಕ್ತ ಅಧ್ಯಾಯ ಬರೆಯುತ್ತೇವೆ ಅಂತಾ ಹೂಂಖರಿಸಿದ್ದ. ಹೀಗೆ ಹೇಳಿ ಕೆಲ ದಿನಗಳಲ್ಲೇ ಪಹಲ್ಗಾಮ್ ಅಟ್ಯಾಕ್ ಆಗಿದೆ. ಅಷ್ಟೇ ಅಲ್ಲಾ ಕಾಶ್ಮೀರದಲ್ಲಿ ಶಾಂತಿ ಕಡದುವ ಹುನ್ನಾರದಿಂದಲೇ ಈ ಖಾಲಿದ್ ನೂರಾರು ಯುವಕರಿಗೆ ಶಸ್ತ್ರಾಭ್ಯಾಸ ನೀಡ್ತಿದ್ದಾನೆ. ಪಾಕಿಸ್ತಾನ ಸೇನೆ, ಐಎಸ್ ಐ ನೆರವಿನಿಂದಲೇ ಅಬೋಟಾಬಾದ್ ನಲ್ಲಿ ಅತಿ ದೊಡ್ಡ ಟ್ರೈನಿಂಗ್ ಕ್ಯಾಂಪ್ ನಡೆಸಿದ್ದಾನೆ ಖಾಲಿದ್.
ಭಾರತದೊಳಗೆ ನುಸುಳಲು ನೂರಾರು ಯುವಕರು ಸಜ್ಜು
ಖಾಲಿದ್ ನ ಅಬೋಟಾಬಾದ್ ಟ್ರೈನಿಂಗ್ ಕ್ಯಾಂಪ್ ನಲ್ಲಿ ನೂರಾರು ಯುವಕರಿಗೆ ಧರ್ಮದ ಹೆಸರಿನಲ್ಲಿ ಮತಾಂಧನೆಯ ವಿಷ ಉಣಸುವ ಕಾರ್ಯ ನಡೆದಿದೆ. ಕಾಶ್ಮೀರದ ಕೈವಶಕ್ಕೆ ನೀವೇ ಧರ್ಮ ಸೈನಿಕರು ಅಂತಾ ಖಾಲಿದ್ ನೀರೆಯುತ್ತಿದ್ದಾನೆ. ಇದಕ್ಕೆ ಖುದ್ದು ಪಾಕ್ ನ ಐಎಸ್ ಐ ಮತ್ತು ಸೇನೆ ಬೆನ್ನೆಲುಬಾಗಿ ನಿಂತಿದೆ. ಅಷ್ಟೇ ಅಲ್ಲಾ ಈ ಕ್ಯಾಂಪ್ ಗಳಲ್ಲಿ ತರಬೇತಿ ಪಡೆದ ಯುವಕರನ್ನು ಕಳ್ಳದಾರಿಯಲ್ಲಿ ಭಾರತದೊಳಗೆ ಸೇರಿಸಲಾಗ್ತಿದೆ. ಕಳ್ಳದಾರಿಯಲ್ಲಿ ಬಂದಿರುವ ಈ ನುಸುಳುಕೋರರೇ ಪಹಲ್ಗಾಮ್ ಕುಕೃತ್ಯ ನಡೆಸಿದ್ರಾ ಅನ್ನೋ ಗುಮಾನಿಯಿದೆ. ಅಷ್ಟೇ ಅಲ್ಲಾ ಕಾಶ್ಮೀರದ ಶಾಂತಿ ಭವಿಷ್ಯದ ಬಗ್ಗೆಯೂ ಈಗ ಹತ್ತಾರು ಸವಾಲುಗಳು ಉದಯಿಸುತ್ತಿವೆ.