ಧಾರವಾಡ : ಮಾಜಿ ಗ್ರಾಪಂ ಅಧ್ಯಕ್ಷನ ಕೊಲೆ ನಡೆದಿರುವ ಘಟನೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ.
ಶಂಕ್ರಯ್ಯ ಪಂಚಯ್ಯ ಮಠಪತಿ ಹತ್ಯೆಯಾದ ವ್ಯಕ್ತಿಯಾಗಿದ್ದು, ಮನೆ ಮುಂದೆ ನಿಂತಿದ್ದ ವೇಳೆ ಯುವಕರು ಏಕಾಏಕಿಯಾಗಿ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾರೆ. ನಂತರ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಶಂಕ್ರಯ್ಯ ಪಂಚಯ್ಯ ಮಠಪತಿ ಸಾವನ್ನಪ್ಪಿದ್ದಾರೆ.
ಹಳೇ ವೈಷಮ್ಯವೇ ಕಾರಣ
ಹಳೇ ವೈಷಮ್ಯ ಇಟ್ಟುಕೊಂಡು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಪ್ರವೀಣ ಕಮ್ಮಾರ್ ಎಂಬಾತನ ಕೊಲೆಯಾಗಿತ್ತು. ಈತ ದೀಪಕ್ ಕಮ್ಮಾರ್ ಎಂಬಾತನ ಸಹೋದರನಾಗಿದ್ದ. ಈತನ ಕೊಲೆ ಕೇಸ್ನಲ್ಲಿ ಮಠಪತಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದೀಗ ಸಹೋದರನ ಕೊಲೆಯ ಸೇಡನ್ನು ದೀಪಕ್ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಮಾಜಿ ಗ್ರಾಪಂ ಅಧ್ಯಕ್ಷನ ಕೊಲೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಗರಗ ಪೋಲಿಸರು ಡಿಸಿಪಿ ಸ್ಥಳಕ್ಕೆ ದೌಡು ಪರಿಶೀಲನೆ ನಡೆಸಿದ್ದಾರೆ.