ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿಪಿ ವೆಂಕಟೇಶ್ ನಿರ್ಮಾಣದ ಚಿತ್ರ RR77 ಕುರಿತು ಚಿತ್ರ ತಂಡ ಮಾತನಾಡಿತು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್ವೀರ್ ಅಭಿನಯಿಸಲಿದ್ದಾರೆ ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ಹೇಳಿದರು.

ಸಂಪೂರ್ಣ ಕಥೆಯನ್ನು ಕೇಳಿ ಡಿಪಿ ವೆಂಕಟೇಶ್ ಅವರು ಕಥೆ ತುಂಬ ಮನಸ್ಸಿಗೆ ಹತ್ತಿರವಾಗಿದೆ. ಇಂತಹ ಕಥೆಗಾಗಿ ಕಾಯುತ್ತಿದ್ದೆ. ಕರ್ನಾಟಕದ ಜನತೆಗೆ ನಮ್ಮ ಸಿನಿಮಾ ಕೊಡುಗೆಯಾಗಲಿ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲರ ಗಮನ ಸೆಳೆಯುತ್ತದೆ ಎಂದು ಮಂಜು ಕವಿ ತಿಳಿಸಿದರು.

ನಿರ್ದೇಶನ ತಂಡದಲ್ಲಿ ಎಸ್.ಜೆ. ಸಂಜಯ್ ದಯಾ, ಗಿರೀಶ್ ಸಾಕಿ, ಸಂಗೀತ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ. ಛಾಯಾಗ್ರಹಣ ರಾಜಕಡುರ್ ನಿರ್ವಹಿಸಿದ್ದಾರೆ. ಎನ್. ಟಿ. ರಾಮಸ್ವಾಮಿಗೌಡ, ತುಷಾರ್, ವಿನೋದ್, ಸನತ್, ಜಗದೀಶ್ ಕೊಪ್ಪ, ಪವಿತ್ರ ಗೊಬ್ಬರಗಾಲ, ಚಂದ್ರಪ್ರಭ ವಿಕ್ಟರಿ, ಸಿಲ್ಲಿ ಲಲ್ಲಿ ಚಿದಾನಂದ ಸೇರಿತಂದೆ ಹಲವರು ನಟಿಸುತ್ತಿದ್ದಾರೆ.
ಧರಣಿ ಹಾಗೂ ನಿಖಿತ ಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಮಂಜು ಕವಿ ರಚಿಸಿ , ರಾಗ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳಿಗೆ ಉತ್ತಮವಾದ ವಾದ್ಯ ಸಂಯೋಜನೆ ವಿಜಯ ಹರಿತ್ಸ. ವಿನು ಮನಸ್ಸು ನೀಡಿದ್ದಾರೆ ಚಿತ್ರಕಥೆಗೆ ಸೂಕ್ತವಾದ ಕಲಾವಿದ ಡಾ. ರಾಜ್ ವೀರ್ ಎಂದು ಮಂಜು ಕವಿ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರೀಕರಣ ಶುರು ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.