ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಈಗ ವಂಚನೆಯ ಆರೋಪ ಕೇಳ ಬಂದಿದೆ. ಈ ವಿಷಯವಾಗಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ನಾನು ಕೆಲಸದಲ್ಲಿ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದೆ. ಹೀಗಾಗಿ ದುಡ್ಡು ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಹೇಳಿದ್ದೆ. ನಮಗೆ 7 ಲಕ್ಷ ರೂಪಾಯಿ ನೀಡಿದ್ದರು. ಅವರ ವರ್ತನೆ ನನಗೆ ಇಷ್ಟವಾಗಲಿಲ್ಲ. ಹೀಗಾಗಿ ಕೆಲವಸನ್ನು ನಿಲ್ಲಿಸಿ ಬೆಂಗಳೂರಿಗೆ ಬಂದೆ. ಅಲ್ಲಿಯವರೆಗೆ ಕೆಲಸಕ್ಕೆ ತಗುಲಿದ ಹಣವನ್ನು ಬಿಟ್ಟು ಉಳಿದ ಹಣವನ್ನು ನಾನು ಅವರಿಗೆ ಮರಳಿ ನೀಡಿದ್ದೇನೆ.
ಇದು ಬಿಸ್ನೆಸ್ ವಿಷಯ. ಸಿವಿಲ್ ಕೋರ್ಟ್ನಲ್ಲಿ ಕೇಸ್ ಮಾಡಬಹುದಿತ್ತು. ಅಗ್ರಿಮೆಂಟ್ ಮುಗಿದು ಹೋಗಿದ್ದರೆ ಅದರ ಮೇಲೆ ಕೇಸ್ ಮಾಡಲು 3 ವರ್ಷ ಸಮಯ ಇರುತ್ತದೆ. 6 ಲಕ್ಷ ರೂಪಾಯಿ ಹಣ ನೀಡದಿದ್ದರೆ ಮಾಧ್ಯಮಗಳ ಎದುರು ಹೋಗುತ್ತೇನೆ ಎಂದರು. ಈ ರೀತಿ ನನಗೆ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.
ಆತನ ವಿರುದ್ಧ ನಾನು ಕ್ರಮ ತೆಗೆದುಕೊಂಡಿದ್ದೇನೆ. ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತೇನೆ. ಮಾಧ್ಯಮಗಳಲ್ಲಿ ಆ ವ್ಯಕ್ತಿ ಏನು ಬೇಕಾದರೂ ಹೇಳುತ್ತಾನೆ. ನಾನು ಒಂದು ಕಡೆ ಇರುವ ವ್ಯಕ್ತಿ ಅಲ್ಲ. ನಾನು ಆ ವ್ಯಕ್ತಿಯ ವಿರುದ್ಧ ಕೇಸ್ ಹಾಕಿದ್ದೇನೆ ಎಂದಿದ್ದಾರೆ.