ಅಹಮದಾಬಾದ್ ನಲ್ಲಾಗಿರುವ ದುರಂತ ಜಗತ್ತಿನ ಯಾವ ದೇಶದಲ್ಲೂ ಆಗಬಾರದು. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ್ದೆ, ಅತ್ಯಂತ ಭಯಾನಕವಾಗಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಅಹಮದಾಬಾದ್ ಗೆ ಭೇಟಿ ನೀಡಿದ್ದ ಡಿಕೆಶಿ, ಬೆಂಗಳೂರಿಗೆ ವಾಪಸ್ ಆಗಿದ್ದು, ಅಲ್ಲಿನ ಭಯಾನಕ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ವಿಮಾನ ಪತನವಾದ ಸ್ಥಳದಿಂದ 500 ಮೀಟರ್ ಮುಂದೇನಾದರೂ ಈ ದುರ್ಘಟನೆ ಘಟಿಸಿದೆ. ಅಪಾರ ಜನವಸತಿ ಪ್ರದೇಶವೇ ಆಹುತಿಯಾಗಿಬಿಡ್ತಿತ್ತು ಅಂತಾ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದ ಬಹುತೇಕ ನಿವಾಸಿಗಳು ಶಾಕ್ ಗೆ ಒಳಗಾಗಿದ್ದಾರೆ. ಕೆಲವರಂತೂ ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದಾರೆ. ಈಗಾಗಲೇ ವಿಮಾನದ ಬ್ಲ್ಯಾಕ್ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಇದರ ಪರಿಶೀಲನೆ ಬಳಿಕ ದುರಂತದ ಹಿಂದಿನ ಸತ್ಯ ಬಯಲಾಗಲಿದೆ ಅಂತಾ ಡಿಸಿಎಂ ಸ್ಪಷ್ಟಪಡಿಸಿದ್ದಾರೆ.