ಬೀದರ್: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ವಿಚಾರವಾಗಿ ಬೆಲ್ದಾಳ ಶರಣರು ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸುಂದರ ಪ್ರದೇಶವನ್ನು ನೋಡಲು ಹೋದವರನ್ನು ಹತ್ಯೆ ಮಾಡಿದ್ದು ಖಂಡನೀಯ. ಇಂತಹ ಘಟನೆಯನ್ನು ನಾನು ಸಹ ಖಂಡಿಸುತ್ತೇನೆ. ಇಂತಹ ಘಟನೆ ಆಗಬಾರದು. ಇದಕ್ಕೆ ಪ್ರತೀಕಾರ ತೀರಿಸಲು ಈಗಾಗಲೇ ಚರ್ಚೆ ಕೂಡ ನಡೆದಿವೆ. ಅಲ್ಲಿ ಯಾಕೆ ಸುರಕ್ಷತೆ ಒದಗಿಸಿಲ್ಲ ಎಂಬ ಸಂಶಯ ಎಲ್ಲರನ್ನೂ ಕಾಡುತ್ತಿದೆ. ಸರ್ಕಾರ ಅಲ್ಲಿ ಸುರಕ್ಷತೆಯನ್ನು ಒದಗಿಸಬೇಕಾಗಿತ್ತು. ಅಂತಹ ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆ ಯಾಕೆ ಕೊಟ್ಟಿಲ್ಲ? ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲಿ ಒಬ್ಬ ಪೊಲೀಸ್ ಕೂಡ ಇರಲಿಲ್ಲ. ಸೇನಾಪಡೆ ಕೂಡ ಅಲ್ಲಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಅಂತಹ ಪ್ರದೇಶದಲ್ಲಿ ರಾಜಾರೋಷವಾಗಿ ಬಂದು ಹೊಡಿತಾರೆ ಅಂದ್ರೆ ಹೇಗೆ ? ಅವರು ಬಾರ್ಡರ್ ಒಳಗೆ ಹೇಗೆ ಬಂದ್ರು ಎಂದು ಪ್ರಶ್ನೆ ಮಾಡಿದ್ದಾರೆ. ಪ್ರತೀಕಾರವನ್ನು ಅಮಾಯಕರ ಮೇಲೆ ತಿರಸಿಕೊಳ್ಳಬಾರದು. ನಿಜವಾದ ಭಯೋತ್ಪಾದಕರ ಮೇಲೆ, ದೇಶಕ್ಕೆ ಅಪಾಯ ಆಗಬೇಕೆನ್ನುವವರ ನಿರ್ಮೂಲನೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಮಂಜುನಾಥ್ ಬಗ್ಗೆ ರಿಯಾಕ್ಟ್
ದಾಳಿಯಲ್ಲಿ ಮೃತರಾದ ಮಂಜುನಾಥ್ ಅವರ ಪತ್ನಿ ಪಲ್ಲವಿ ಹೇಳಿದ್ದು, ಧರ್ಮ ಕೇಳಿದ್ದು ನನಗೆ ಗೊತ್ತಿಲ್ಲ ಎಂದು ಹೇಳುತಿದ್ದಾರೆ. ಧರ್ಮ ಕೇಳಿ ಹೊಡದಿದ್ದು ಖಚಿತ ಇಲ್ಲ. ಅವರ ಮನೋಭಾವ ಕೇಳಿ ಹೊಡಿದಿರಬಹುದು. ಹಿಂದೂ ಎಂದ ಕೂಡಲೇ ಕೆಲವರ ತಲೆಯಲ್ಲಿ ಏನೋ ಒಂದು ಇದೆ. ಹಿಂದೂ- ಮುಸ್ಲಿಂ ಎನ್ನುವ ಭೇದ ಇರಬಾರದು. ಕೆಟ್ಟ ಮನಸ್ಸಿರುವವರಿಗೆ ಆ ಭಾವ ಇರುತ್ತದೆ. ನಾವು ಎಷ್ಟೇ ಸಮಾನತೆಯ ಪಾಠ ಹೇಳಿದರೂ ಜನರಲ್ಲಿ ಕೂಡಿ ಬದುಕುವ ಮನೋಭಾವವಿಲ್ಲ ಎಂದು ತಿಳಿಸಿದ್ದಾರೆ.
ಯುದ್ಧದ ಅನಿವಾರ್ಯತೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ
ಯುದ್ಧದ ಅನಿವಾರ್ಯತೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಮಾಯಕರು ಸಾಯ್ತಾರೆ ಅಂದ್ರೆ ಅಂತಹ ಯುದ್ಧ ಯಾಕೆ ಬೇಕು? ಯುದ್ಧ ಮಾಡಬೇಕು. ಆದರೆ ಅಮಾಯಕರು ಸಾಯಬಾರದು. ವಾಸ್ತವವಾಗಿ ಯಾರು ಅಪರಾಧಿಗಳಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಭಯೋತ್ಪಾದಕರನ್ನು ಬೆಂಬಲಿಸುವವರಿಗೂ ಶಿಕ್ಷೆ ಆಗಬೇಕು.
ಒಂದು ಕಡೆ ಯುದ್ಧವನ್ನೇ ಮಾಡ್ತೀವಿ ಅಂದ್ರೆ ಅಮಾಯಕರಿಗೆ ತೊಂದರೆ ಆಗುತ್ತದೆ. ಯುದ್ಧ ಯಾವ ಕಾಲಕ್ಕೂ ಆಗಬಾರದು. ಆದರೆ, ಅಪಾಯಕಾರಿ ಜನರೂ ಇರಬಾರದು. ಈ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು ಎಂದು ಹೇಳಿದ್ದಾರೆ.