ಹಿಂದುಸ್ತಾನವನ್ನು ಹಿಗ್ಗಾ ಮುಗ್ಗಾ ಬೈದವರಿಗೆ ಭಾರತದ ಖಾಸಗಿ ವಾಹಿನಿಯೊಂದು ಹಣ ನೀಡುತ್ತಿತ್ತಾ?
ಹೌದು, ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮೀರ್ ಹೊಸ ಬಾಂಬ್ ಸಿಡಿದ್ದಾರೆ. ಭಾರತದ ಪತ್ರಕರ್ತ ಅರ್ನಬ್ ಗೋಸ್ವಾಮಿ ಮಾಲೀಕತ್ವದ ಖಾಸಗಿ ವಾಹಿನಿ, ತನ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತು. ತಮ್ಮ ವಾಹಿನಿಯ ಡಿಬೇಟ್ ಗಳಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನದ ಪ್ರಗತಿಪರರು, ರಾಜಕಾರಣಿಗಳು, ಪತ್ರಕರ್ತರಿಗೆ ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತು.
ಅಷ್ಟೇ ಅಲ್ಲಾ ಇದಕ್ಕೆ ಅವರಿಗೆಲ್ಲಾ ಹಣವನ್ನೂ ನೀಡಲಾಗುತ್ತಿತ್ತು ಅನ್ನೋ ವಿಚಾರವನ್ನ ಹಮೀದ್ ಮೀರ್ ಬಹಿರಂಗ ಪಡಿಸಿದ್ದಾರೆ. ಈಗ್ಗೆ 20 ವರ್ಷಗಳ ಹಿಂದಿನಿಂದ ನನಗೆ ಗೋಸ್ವಾಮಿ ಪರಿಚಯ, ಅವರು ಮೊದಲಿಗೆ ಕಾರ್ಯನಿರ್ಹಸುತ್ತಿದ್ದ ವಾಹಿನಿಯ ಕಾರ್ಯಕ್ರಮಗಳಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ತಮ್ಮದೇ ಒಡೆತನದ ವಾಹಿನಿ ಆರಂಭಿಸುತ್ತಿದ್ದಂತೆ ಅರ್ನಬ್ ಬದಲಾಗಿದ್ದರು. ತಮ್ಮ ವಾಹಿನಿಯ ಟಿಆರ್ ಪಿ ವೃದ್ಧಿಗೆ ಪಾಕಿಸ್ತಾನದ ಅತಿಥಿಗಳನ್ನು ಶೋನ ಭಾಗವಾಗಿಸಲಾಗುತ್ತಿತ್ತು. ಅವರಿಗೆಲ್ಲಾ ಉತ್ತಮ ಹಣ ನೀಡಿ ಭಾರತವನ್ನು ವಿನಾಕಾರಣ ನಿಂದಿಸುವಂತೆ ಸೂಚಿಸಲಾಗುತ್ತಿತ್ತು.
ಈ ಮೂಲಕ ತಾವು ತಮ್ಮದೇ ಧಾಟಿಯಲ್ಲಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿ, ಕಾರ್ಯಕ್ರಮದ ನಂಬರ್ ಹೆಚ್ಚಿಸಿಕೊಳ್ತಿದ್ರು. ಈ ಬಗ್ಗೆ ನನಗೆ ಖುದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಣ ಪಡೆದವರೇ ಈ ವಿಚಾರವನ್ನು ತಿಳಿಸಿದ್ದಾರೆ. ಇವತ್ತಿಗೆ ನಿಜಕ್ಕೂ ಗೋಸ್ವಾಮಿ ಪತ್ರಕರ್ತರಾಗಿ ಉಳಿದಿಲ್ಲ ಅಂತಲೂ ಹಮೀದ್ ವಾಗ್ದಾಳಿ ನಡೆಸಿದ್ದಾರೆ.