ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚನ್ನಗಿರಿ, ಹೊನ್ನಾಳಿ ತಾಲೂಕಿನಲ್ಲಿ ಹಳ್ಳಗಳೆಲ್ಲ ಭರ್ತಿಯಾಗಿವೆ. ಬೆಳಲಗೆರೆ, ಬಸವಪಟ್ಟಣದಲ್ಲಿ ಹಳ್ಳಗಳು ತುಂಬಿ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.
ಬೆಳಲಗೆರೆ – ಬಸವಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದ್ದು, ಮತ್ತೊಂದೆಡೆ ಹೊನ್ನಾಳಿ ತಾಲೂಕು ಕುಂಬಳೂರಲ್ಲಿ ಧಾರಾಕಾರ ಮಳೆಯಾಗಿರುವ ಪರಿಣಾಮ ಕೆನಾಲ್ ಉಕ್ಕಿ ಹರಿದು ಅಡಕೆ ತೋಟಕ್ಕೆ ನೀರು ನುಗ್ಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.