ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜಲ ಮಂಡಳಿ ವಿತರಿಸುತ್ತಿರುವ ಟ್ಯಾಂಕರ್ ನೀರಿಗೆ ಭಾರೀ ಬೇಡಿಕೆ ಬರುತ್ತಿದೆ.
ಕಳೆದ ಏಪ್ರಿಲ್ ನಲ್ಲಿ ಜಲಮಂಡಳಿ ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಲು ಹೊಸ ಯೋಜನೆ ಜಾರಿಗೆ ತರಲಾಗಿತ್ತು. ಕೇವಲ ಒಂದೇ ತಿಂಗಳಲ್ಲಿ ಒಂದು ಕೋಟಿ ಲೀಟರ್ ನೀರು ಮಾರಾಟವಾಗಿದೆ. ಈ ಮೂಲಕ ಸಂಚಾರಿ ಕಾವೇರಿ ಟ್ಯಾಂಕರ್ ಯೋಜನೆ ದಾಖಲೆ ಪ್ರಮಾಣದಲ್ಲಿ ನೀರು ಮಾರಾಟ ಮಾಡಿದೆ. ಬೇಸಿಗೆ ಕಾಲದಲ್ಲಿ ಟ್ಯಾಂಕರ್ ಮಾಫಿಯಾ ಗೆ ಬ್ರೇಕ್ ಹಾಕಲು ಕಾವೇರಿ ಸಂಚಾರಿ ಟ್ಯಾಂಕರ್ ಯೋಜನೆ ಜಾರಿಗೆ ತರಲಾಗಿತ್ತು.
ಜಲಮಂಡಳಿಯ ಈ ಯೋಜನೆಗೆ ಭರ್ಜರಿ ರೆಸ್ಪನ್ಸ್ ಸಿಕ್ಕಿದೆ. ಹೀಗಾಗಿ ಇಲ್ಲಿಯವರೆಗೆ ಒಟ್ಟು 1,532 ಟ್ಯಾಂಕರ್ ಕಾವೇರಿ ನೀರು ಮಾರಾಟವಾಗಿದೆ. ಇದರಿಂದಾಗಿ ಜಲಮಂಡಳಿಗೆ ಇಲ್ಲಿಯವರೆಗೆ 14 ಲಕ್ಷ ರೂ. ಆದಾಯ ಹರಿದು ಬಂದಿದೆ.
ನಗರದ ಪೂರ್ವ ಹಾಗೂ ಕೆಅರ್ ಪುರಂ.ಮಹಾದೇವಪುರದಲ್ಲಿ ದಾಖಲೆ ಮಟ್ಟದಲ್ಲಿ ನೀರು ಮಾರಾಟವಾಗಿದೆ. ಶೇ. 50ರಷ್ಟು ಕಾವೇರಿ ಟ್ಯಾಂಕರ್ ನೀರು ಐಟಿ.ಬಿಟಿ ಕಂಪನಿಗಳಿಗೆ ಮಾರಾಟವಾಗಿದೆ. ಅಲ್ಲದೇ, ದಿನದಿಂದ ದಿನಕ್ಕೆ ಕಾವೇರಿ ಟ್ಯಾಂಕರ್ ನೀರಿನ ಬೇಡಿಕೆ ಹೆಚ್ಚಳವಾಗಿದೆ. ಗ್ರಾಹಕರು ಅನ್ ಲೈನ್ ಮುಖಾಂತರ ಕಾವೇರಿ ಟ್ಯಾಂಕರ್ ಬುಕ್ಕಿಂಗ್ ಸೌಲಭ್ಯ ಪಡೆಯಬಹುದು. ಬುಕ್ ಮಾಡಿದರೆ ಮನೆ ಬಾಗಿಲಿಗೆ ಕಾವೇರಿ ಟ್ಯಾಂಕರ್ ನೀರು ಸರಬರಾಜು ಆಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಕರ್ನಾಟಕ ನ್ಯೂಸ್ ಬೀಟ್ ಗೆ ಮಾಹಿತಿ ನೀಡಿದ್ದಾರೆ.