ಭಾರತ-ಪಾಕ್ ಮಧ್ಯೆ ಇನ್ನೂ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸೈಬರ್ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ ಸೂಚನೆ ನೀಡಿದ್ದಾರೆ.
ಸೈಬರ್ ಕ್ರಿಮಿನಲ್ ಗಳು ಉದ್ವಿಗ್ನ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಆದ್ದರಿಂದ ಅಪರಿಚಿತ ಲಿಂಕ್ ಗಳು, ಇಮೇಲ್ ಗಳ ಮೇಲೆ ನಿಗಾ ವಹಿಸಿ. ಅಪರಿಚಿತ ನ್ಯೂಸ್ ಲಿಂಕ್ ಗಳು, ಎಪಿಕೆ ಪೈಲ್ಸ್, ಅಪರಿಚಿತ ಫೈಲ್ ಗಳನ್ನು ಓಪನ್ ಮಾಡದಂತೆ ಸೂಚನೆ ನೀಡಿದ್ದಾರೆ. ಫಾರ್ವರ್ಡ್ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಂತೆ ಎಚ್ಚರಿಕೆ ವಹಿಸಿ. ವಾಟ್ಸಾಪ್ ಲಿಂಕ್, ಸಂದೇಶಗಳಿಂದ ಸೈಬರ್ ಕ್ರೈಮ್ ಸಂತ್ರಸ್ಥರಾಗದಂತೆ ಎಚ್ಚರಿಕೆ ವಹಿಸಿ. ವಾಟ್ಸಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಟ್ಟುಕೊಳ್ಳುವಂತೆ ನಾಗರಿಕರಿಗೆ ವಿಡಿಯೋ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದಾರೆ.