ಭಾರತ-ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಸಮರ ಆರಂಭವಾಗಿದೆ. ಈ ನಿಟ್ಟಿನಲ್ಲೇ ಜಮ್ಮು ವ್ಯಾಪ್ತಿ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ಹಲವರು ಕಣಿವೆ ರಾಜ್ಯವನ್ನು ತೊರೆಯಲು ಮುಂದಾಗುತ್ತಿದ್ದಾರೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲೇ, ಭಾರತೀಯ ರೈಲ್ವೆ, ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಆಯೋಜಿಸಿದೆ.
ಜಮ್ಮು ಮತ್ತು ಉಧಮ್ ಪುರದಿಂದದ ವಿಶೇಷ ರೈಲುಗಳನ್ನು ಆಯೋಜಿಸಲಾಗಿದ್ದು, ದೆಹಲಿಗೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಜಮ್ಮು ಮತ್ತು ಉಧಮ್ ಪುರದಿಂದ ಹೊರಡೋ ರೈಲುಗಳು ದೆಹಲಿಗೆ ಸಂಚರಿಸಲಿವೆ, ಪ್ರಯಾಣಿಕರು ಸದುಪಯೋಗ ಪಡೆಯಬಹುದು ಅಂತಾ ರೈಲ್ವೆ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.