ಬೆಂಗಳೂರು: ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತ ಉಪಾಧ್ಯಕ್ಷ ಡಿ.ಕೆ.ಸದಾಶಿವ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗದ ತುಂಗಭದ್ರಾ ಸಕ್ಕರೆ ಕಾರ್ಖಾನೆಯಲ್ಲಿ ನೌಕರರಾಗಿ ಸೇರುವ ಮೂಲಕ ಅವರು ಕಾರ್ಮಿಕ ಜೀವನ ಆರಂಭಿಸಿದರು. ಅಲ್ಲದೆ ಶೇμÁದ್ರಿ ಜೊತೆಗೆ ಸೇರಿ ಬಿಎಂಎಸ್ ಸ್ಥಾಪನೆ ಮಾಡಿದರು. ಜೊತೆಗೆ ಜಿಲ್ಲೆಯಲ್ಲಿ ಹತ್ತಾರು ಕಾರ್ಮಿಕ ಯೂನಿಯನ್ ಸ್ಥಾಪನೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಬಳಿಕ ಬಿಎಂಎಸ್ ಪೂರ್ಣಾವಧಿ ಕೆಲಸಕ್ಕೆ ನಿಯೋಜಿತ ಆದ ಅವರು ಸಕ್ಕರೆ ಕಾರ್ಖಾನೆ ನೌಕರ ಹುದ್ದೆಗೆ ರಾಜೀನಾಮೆ ನೀಡಿ, ಇಡೀ ರಾಜ್ಯದಲ್ಲಿ ಸುತ್ತಾಡಿ ಬಿಎಂಎಸ್ ಪ್ರಬಲವಾಗಿ ಕಟ್ಟಿ, ಕೊನೆಯವರೆಗೂ ಕಾರ್ಮಿಕ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಬಂಧು ಮಿತ್ರರು ಮತ್ತು ಅಭಿಮಾನಿಗಳಿಗೆ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.