ಕಲಬುರಗಿ: ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಒಳಾಂಗಣ ಕ್ರಿಡಾಂಗಣ ಉದ್ಘಾಟನೆ ಮಾಡಲು ಬಂದಿದ್ದ ಶಾಸಕ ಅಜಯ್ ಸಿಂಗ್ ಹಾಗೂ ಕ್ರೀಡಾಪಟುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಒಳಂಗಾಣ ಕ್ರೀಡಾಂಗಣದಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಉದ್ಘಾಟನೆ ಮಾಡಬೇಡಿ ಅಂತ ಕ್ರಿಡಾಪಟುಗಳು ಪಟ್ಟು ಹಿಡಿದಿದ್ದರು. ಈ ವೇಳೆ ಕ್ರೀಡಾಪಟುಗಳ ಮಾತಿಗೆ ಬೆಲೆ ಕೊಡದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಮುಂದಾಗಿದ್ದರು. ಹೀಗಾಗಿ ಕ್ರೀಡಾಪಟುಗಳು ಶಾಸಕ ಅಜಯ್ ಸಿಂಗ್ ವಿರುದ್ಧ ಗೂಂಡಾ ಎಂದ ಹೇಳಿ ಅಜಯ್ ಸಿಂಗ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ವೇಳೆ ಅಜಯ್ ಸಿಂಗ್ ಅಲ್ಲಿಂದ ಕಾಲ್ಕಿತ್ತರು.