ಚಿಕ್ಕಬಳ್ಳಾಪುರ: ತಿರುಪತಿಗೆ ಹೋಗಿ ಬರುತ್ತಿದ್ದ ಟಿಟಿ ವಾಹನ ಭೀಕರವಾಗಿ ಅಪಘಾತಗೊಂಡಿದ್ದು, ಮೂವರು ಸಾವನ್ನಪ್ಪಿ, 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬಾಗೇಪಲ್ಲಿ ಮೂಲದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂದ್ರ ಪ್ರದೇಶದ ಮದನಪಲ್ಲಿಯ ಕುರುಬಲಕೋಟ ಮಂಡಲಂ ಚೆನ್ನಾಮರ್ರಿ ಮಿಟ್ಟ ಬಳಿ ಈ ಘಟನೆ ನಡೆದಿದೆ. ಬಾಗೇಪಲ್ಲಿ ತಾಲ್ಲೂಕಿನ ಮೇಘರ್ಷ್ (17), ಚರಣ್(17) ಹಾಗೂ ಶ್ರಾವಣಿ (28) ಸಾವನ್ನಪ್ಪಿರುವ ದುರ್ದೈವಿಗಳು ಎನ್ನಲಾಗಿದೆ.
ಅಪರಿಚಿತ ಬೃಹತ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಾಗೇಪಲ್ಲಿ ಯಿಂದ ತಿರುಪತಿ ಗೆ ತೆರಳುತ್ತಿದ್ದ ಮಾರ್ಗ ಮದ್ಯೆ ಈ ಘಟನೆ ನಡೆದಿದೆ.