ಮನುಷ್ಯ ಸಂಘಜೀವಿ. ಓಡುತ್ತಿರುವ ಬದುಕಿನೊಂದಿಗೆ ಕಾದಾಟ ನಡೆಸುತ್ತಿರುವ ಈ ಸಂಘಜೀವಿ ಈಗ ಆರೋಗ್ಯವನ್ನೇ ಹೇಳು ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ನಮ್ಮ ಆರೋಗ್ಯದ ಮೇಲಿನ ಗಮನ ಬಹಳ ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಕೆಲಸ…ಕೆಲಸ…ಅಂದುಕೊಂಡು ಅತಿಯಾದ ಕೆಲಸ, ಓಡಾಟಗಳಿಂದ ನಮ್ಮ ದೇಹದ ಮೇಲೆ ಇನ್ನಷ್ಟು ಘಾಸಿ ಮಾಡಲು ಆರಂಭಿಸಿದ್ದೇವೆ. ಇಂತಹ ಸನ್ನಿವೇಶದಲ್ಲಿ ಸಮಯಕ್ಕೆ ಸರಿಯಾಗಿ ಊಟ ಸೇವಿಸಲು ಸಾಧ್ಯವಾಗಲ್ಲ. ನೀರು ಕುಡಿಯುವುದನ್ನು ಕೂಡ ಹಲವರು ಮರೆತಿರುತ್ತಾರೆ. ಇದರಿಂದ ದೇಹದಲ್ಲಿ ನಿಶ್ಯಕ್ತಿ, ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣುತ್ತವೆ. ಹೀಗಾಗಿ ಜೀವ ಬೇಗ ಸುಸ್ತಾಗಿ ಬಿಡುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರಲು ನಾವು ಕೆಲವು ಟಿಪ್ಸ್ ಗಳನ್ನು ನಿಮಗೆ ಹೇಳುತ್ತಿದ್ದೇವೆ.

ದಿನನಿತ್ಯ ಧ್ಯಾನ!
ಎಲ್ಲ ಸಮಸ್ಯೆಗಳಿಗೂ ಧ್ಯಾನ ಮದ್ದು ಅಂತಾರೆ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಧ್ಯಾನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಾನಸಿಕವಾಗಿ ನಾವು ಕುಗ್ಗುವ ಸಾಧ್ಯತೆ ಇದೆ. ವಿವಿಧ ಭಂಗಿಗಳ ಯೋಗಾಭ್ಯಾಸಗಳನ್ನು ಮಾಡುವುದು ಉತ್ತಮ. ದೇಹದ ಒತ್ತಡ ಕಡಿಮೆ ಮಾಡುವುದರಲ್ಲಿ ಧ್ಯಾನ ಬಹುಮುಖ್ಯ.

ಯಥೇಚ್ಛವಾದ ನೀರು ಸೇವನೆ!
ದೇಹಕ್ಕೆ ನೀರು ಅವಶ್ಯಕ. ಪ್ರತೀ ಟೈಮ್ ನಲ್ಲಿಯೂ ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಜೊತೆಗೆ ಇಟ್ಟುಕೊಳ್ಳುವುದು ಒಳ್ಳೆಯದು. ಬಾಯಾರಿಕೆ ಆದಾಗ ಮಾತ್ರ ಅಲ್ಲದೇ ಬೇರೆ ಸಮಯದಲ್ಲಿಯೂ ನೀರಿನ ಸೇವನೆ ಮುಖ್ಯ. ವಿವಿಧ ಬಗೆಯ ಹಣ್ಣು ಹಂಪಲುಗಳನ್ನು ಸೇವಿಸಿ, ಜೊತೆಗೆ ಆಹಾರದಲ್ಲಿ ತರಕಾರಗಳನ್ನು ಸೇವಿಸುವುದು ಮುಖ್ಯ. ಹೀಗೆ ನೀರನ್ನು ಸೇವಿಸುತ್ತಿದ್ದರೆ ನಮ್ಮ ಆರೋಗ್ಯ, ಮನಸ್ಸನ್ನು ಇನ್ನಷ್ಟು ಖುಷಿಯಾಗಿರಿಸಲು ಸಾಧ್ಯವಾಗುತ್ತದೆ. ಈ ರೀತಿ ಜೀವನ ಶೈಲಿ ಅಳವಡಿಸಿಕೊಂಡರೆ ಮಾತ್ರ ನಾವು ಆರೋಗ್ಯದಿಂದ ಬದುಕುತ್ತೇವೆ.