ಬೀದರ್: ತಂಗಿಯ ಮದುವೆಗೆಂದು ಸ್ವಗ್ರಾಮಕ್ಕೆ ಬಂದಿದ್ದ ಯೋಧಗೆ ಸೇನೆಯಿಂದ ತುರ್ತು ಕರೆ ಬಂದಿದ್ದು, ತಾಯ್ನಾಡ ಸೇವೆಗೆ ಮರಳಿ ಹೋಗಿದ್ದಾರೆ.
ಭಾರತ-ಪಾಕ್ (India-Pak) ನಡುವೆ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ಸಹೋದರಿಯ ಮದುವೆ ಸಂಭ್ರಮದಲ್ಲಿದ್ದ ಯೋಧ ಮರಳಿ ಹೋಗಿದ್ದಾರೆ. ಈ ವೇಳೆ ಕುಟುಂಬಸ್ಥರು ಹಣೆಗೆ ತಿಲಕವಿಟ್ಟು ದೇಶ ಸೇವೆಗಾಗಿ ಕಳುಹಿಸಿದ್ದಾರೆ.
ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಚಂದಾಪುರ ಗ್ರಾಮದ ಯೋಧ ಬಸವಕಿರಣ ಬಿರಾದಾರ ಪಂಜಾಬ್ನ (Punjab) ಅಮೃತಸರದಲ್ಲಿ (Amritsar) ಸೇವೆ ಸಲ್ಲಿಸುತ್ತಿದ್ದರು. ಏ.27ರಂದು ಸಹೋದರಿಯ ಮದುವೆ ಇದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದರು. ಆದರೆ, ಗಡಿಯಲ್ಲಿ ಯುದ್ಧದ ಭೀತಿ ಆವರಿಸಿದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಕರೆ ಬಂದಿದೆ. ಹೀಗಾಗಿ ಮರಳಿ ಹೋಗಿದ್ದಾರೆ. ಗ್ರಾಮಸ್ಥರು ಹಾಗೂ ಇಡೀ ಕರುನಾಡು ಹೆಮ್ಮೆಯಿಂದ ಕಳುಹಿಸಿದೆ.