ಬಾಗಲಕೋಟೆ : ಎರಡು ಕಾರುಗಳು ಮುಖಾಮುಖಿಯಾದ ಪರಿಣಾಮ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಕ್ಕಸಗಿ ಗ್ರಾಮದ ಬಳಿಯ ರಾಯಚೂರು-ಬೆಳಗಾವಿ ಹೆದ್ದಾರಿಯಲ್ಲಿ ನಡೆದಿದೆ.
ಗಂಗಮ್ಮ ವಿರೇಶ ಅಂಗಡಿ (50), ಸಂದೇಶ ಅಂಗಡಿ (20) ಮೃತ ದುರ್ದೈವಿಗಳಾಗಿದ್ದು, ಬಾದಾಮಿ ತಾಲೂಕಿನ ನೆಲವಗಿ ಗ್ರಾಮದವರು. ಇನ್ನು ಗಾಯಾಗೊಂಡಿರುವ ವಿರೇಶ ಅಂಗಡಿ(55) ಹಾಗೂ ಸತೀಶ ಅಂಗಡಿ (28) ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಹಾರಾಷ್ಟ್ರ ಮೂಲದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ.