ಹಾಸನ ಜಿಲ್ಲೆಯ ರೆಸಾರ್ಟ್ ವೊಂದರಲ್ಲಿ ಸಿಬ್ಬಂದಿಯಿಂದ ಅತಿಥಿಗಳ ಮೇಲೆ ಹಲ್ಲೆ ನಡೆದಿದ್ದ ಆರೋಪವೊಂದು ಕೇಳಿ ಬಂದಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ರೆಸಾರ್ಟ್ಗೆ ಬಂದ ಅತಿಥಿಗಳಿಂದಲೇ ದಾಂಧಲೆ ನಡೆದಿರುವ ಆರೋಪವನ್ನು ರೆಸಾರ್ಟ್ ಮಾಲೀಕರು ಮಾಡಿದ್ದಾರೆ. ಅಲ್ಲದೇ, ಈ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಅತಿಥಿಗಳು ದೊಣ್ಣೆ ಬಡಿಗೆ ಹಿಡಿದು ಪುಂಡಾಟ ನಡೆಸಿದ್ದಾರೆ. ರೆಸಾರ್ಟ್ನಲ್ಲಿ ತಂಗಿದ್ದ ಮತ್ತೊಂದು ಕುಟುಂಬದ ಮೇಲೆ ಕಲ್ಲು ತೂರಾಟ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ತಾವೇ ಹಲ್ಲೆ ನಡೆಸಿ ಆನಂತರ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದ್ದಾರೆ ಎಂದು ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ತಮ್ಮ ಸಿಬ್ಬಂದಿ ವಿರುದ್ಧ ವಿನಾಕಾರಣ ಆರೋಪ ಮಾಡಲಾಗಿದೆ. ರಾತ್ರಿ ಏಳು ಗಂಟೆ ಬಳಿಕ ಈಜುಕೋಳ ಬಳಸದಂತೆ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಪ್ರಶ್ನೆ ಮಾಡಿದ ಮತ್ತೊಂದು ಗೆಸ್ಟ್ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಂಗಳೂರಿನಿಂದ ಬಂದಿದ್ದ ಮೂರು ಕುಟುಂಬಗಳ 20 ಕ್ಕೂ ಹೆಚ್ಚು ಜನ ಗುಂಪು ಕಟ್ಟಿಕೊಂಡು ರೆಸಾರ್ಟ್ನಲ್ಲಿ ಮಾರಣಾಂತಿಕ ಹಲ್ಲೆ ಯತ್ನ ಮಾಡಿದ್ದಾರೆ. ಕೆಲವು ಕಿಡಿಗೇಡಿಗಳ ಪುಂಡಾಟ ಸಿಸಿ ಕ ಯಾಮೆರಾಗಳಲ್ಲಿ ಸೆರೆಯಾಗಿದೆ. ಪುಡಿ ರೌಡಿಗಳಂತೆ ರೆಸಾರ್ಟ್ ತುಂಬ ಓಡಾಡುತ್ತಾ ದೌರ್ಜನ್ಯ
ಎಸಗಿದ್ದಾರೆಂದು ರೆಸಾರ್ಟ್ ಮಾಲೀಕರು ಆರೋಪ ಮಾಡಿದ್ದಾರೆ. ಈ ಘಟನೆ ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.