ಬೆಂಗಳೂರಿಗೆ ಅಂಟಿಕೊಂಡಂತಿರುವ ಜಿಲ್ಲೆ ತುಮಕೂರು. ಇದೀಗ ಈ ತುಮಕೂರನ್ನು ತುಂಡಾಗಿಸಲು ಮುಹೂರ್ತ ನಿಗದಿಯಾದಂತಾಗಿದೆ.
ಹೌದು, ಕಲ್ಪತರು ನಾಡು ಅಂತಲೇ ಕರಿಸಿಕೊಳ್ಳುವ ತುಮಕೂರನ್ನು ಮೂರು ಮಾಡುವ ಸಿದ್ದತೆ ನಡೆದಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಕೆ.ಎನ್. ರಾಜಣ್ಣ, ಶೀಘ್ರವೇ ಮಧುಗಿರಿಯನ್ನು ಜಿಲ್ಲೆಯಾಗಿ ಘೋಷಿಸುತ್ತೇವೆ ಎಂದಿದ್ದಾರೆ.
ಅಷ್ಚೇ ಅಲ್ಲಾ ನನ್ನ ಅವಧಿಯಲ್ಲೇ ಇದನ್ನು ಅಭಿವೃದ್ಧಿ ಮಾಡಿ ತೋರಿಸ್ತೀನಿ ಅಂತಲೂ ರಾಜಣ್ಣ ಹೇಳಿದ್ದಾರೆ. ತುಮಕೂರನ್ನು ಬೇಕಿದ್ರೆ ಮೂರು ಭಾಗ ಮಾಡಬಹುದು. ತಿಪಟೂರು, ಮಧುಗಿರಿ, ತುಮಕೂರು ಜಿಲ್ಲೆಗಳನ್ನಾಗಿ ಮಾಡಬಹುದು ಅಂತಲೂ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಧಾರವಾಡವನ್ನೂ ಮೂರು ಜಿಲ್ಲೆಯಾಗಿ ಭಾಗ ಮಾಡುತ್ತೇವೆ ಎಂದು ಹೇಳಿದ್ದಾರೆ