ಮುಂಬೈ: ಅಮೆರಿಕ ಅಧ್ಯಕ್ಷರ ಒಂದೇ ಒಂದು ನಿರ್ಧಾರ ವಿಶ್ವದ ಕೋಟ್ಯಾನು ಕೋಟಿ ಸಂಪತ್ತನ್ನೇ ಕರಗಿಸಿ ಬಿಟ್ಟಿದೆ. ಮಿತ್ರ ರಾಷ್ಟ್ರಗಳ ವಿರುದ್ಧ ಸುಂಕ ಸಮರ ಸಾರಿರುವ ಟ್ರಂಪ್ ರ ನಡೆ ಶತಕೋಟ್ಯಾಧೀಶರ ಜಂಗಾಬಲವನ್ನೇ ಪುಡಿಗೊಳಿಸಿರುವುದು ಸುಳ್ಳಲ್ಲ.
ನಾಳೆಯಿಂದ ಅಧಿಕೃತವಾಗಿ ಟ್ರಂಪ್ ರ ಹೊಸ ತೆರಿಗೆ ನೀತಿ ಜಾರಿಗೆ ಬರುತ್ತಿದೆ. ಆದರೆ, ಸಿನಿಮಾ ರಿಲೀಸ್ ಗೂ ಮುನ್ನ ಕೇವಲ ಟ್ರೇಲರ್ ಎನ್ನುವಂತೆ ನಿನ್ನೆ ಒಂದೇ ದಿನ ವಿಶ್ವದ ಬಹುತೇಕ ರಾಷ್ಟ್ರಗಳ ಷೇರುಪೇಟೆಯಲ್ಲಿ ರಕ್ತಪಾತವೇ ನಡೆದು ಹೋಗಿದೆ. ಅದರಲ್ಲೂ ಭಾರತದ ಮುಂಬೈನ ದಲಾಲ್ ಸ್ಟ್ರೀನ್ ನಲ್ಲಂತೂ ಗೂಳಿ ಹೂಂಖರಿಸಿದೆ. ಕೇವಲ 10 ಸೆಕೆಂಡ್ ನಲ್ಲಿ ಬರೋಬ್ಬರಿ 20 ಲಕ್ಷ ಕೋಟಿ ರೂ. ಬಂಡವಾಳ ಕರಗಿ ಹೋಗಿದೆ. ಈ ಮೂಲಕ ನಿನ್ನೆ ದೇಶಿ ಷೇರುಮಾರುಕಟ್ಟೆ ಪಾಲಿಗೆ ಕರಾಳ ಸೋಮವಾರವಾಗಿತ್ತು.
ಕ್ಷಣಾರ್ಧದಲ್ಲಿ ಅತಿರಥರ ಸಂಪತ್ತು ಗೋವಿಂದ
ಟ್ರಂಪ್ ರ ತೆರಿಗೆ ನೀತಿ ಭೀತಿಯಲ್ಲಿರುವ ಜಾಗತಿಕ ಹೂಡಿಕೆದಾರರು ದೇಶಿ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯುವ ಕಾರ್ಯಕ್ಕೆ ಮುಂದಾದರು. ಪರಿಣಾಮ ಮುಂಬೈ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು. 4 ಸಾವಿರ ಅಂಕಗಳ ಕುಸಿತದೊಂದಿಗೆ ಚೇತರಿಕೆಯಿಲ್ಲದೆ ಮಾರುಕಟ್ಟೆ ಮಕಾಡೆ ಮಲಗಿತು. ಹೀಗಾಗಿಯೇ ಅಂಬಾನಿ ಅದಾನಿ ಸೇರಿ ದೇಶದ ನಾಲ್ವರು ಶತಕೋಟ್ಯಾಧೀಶರ 85 ಸಾವಿರ ಕೋಟಿ ಸಂಪತ್ತು ಕರಗಿಹೋಗಿದೆ.
ಈ ಪೈಕಿ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿಯವರ 30.600 ಕೋಟಿ ರೂ., ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿಯವರ 25.500 ಕೋಟಿ ರೂ., ಜಿಂದಾಲ್ ಸಂಸ್ಥೆಯ ಸಾವಿತ್ರಿ ಜಿಂದಾಲ್ ರ 18.700 ಕೋಟಿ ರೂ. ಹಾಗೂ ಹೆಚ್ ಸಿಎಲ್ ನ ಒಡೆಯ ಶಿವ ನಾಡಾರ್ ಅವರಿಗೆ 12.750 ಕೋಟಿ ರೂ. ನಷ್ಟವಾಗಿದೆ.