ಬೆಂಗಳೂರು: ಬೆಂಗಳೂರಿಗರ ಪಾಲಿನ ಆಕ್ಸಿಜನ್ ಪಾರ್ಕ್ ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಅಂದರೆ, ಸಿಲಿಕಾನ್ ಸಿಟಿಯಲ್ಲಿರುವ ಕಬ್ಬನ್ ಪಾರ್ಕ್ ಪರಿಸರಕ್ಕೆ ಈಗ ಮಾರಕ ಪರಸ್ಥಿತಿ ಎದುರಾಗುವ ಭೀತಿ ಕಾಡುತ್ತಿದೆ.
ಸಂಚಾರಿ ಪೊಲೀಸರ ಮನವಿ ಪುರಸ್ಕರಿಸಿರುವ ಸರ್ಕಾರ, ವರ್ಷದ ಎಲ್ಲಾ ದಿನ ಕಬ್ಬನ್ ಪಾರ್ಕ್ ನೊಳಗೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕಬ್ಬನ್ ಪಾರ್ಕ್ ವಾಯು ಪ್ರಿಯರಿಗೆ ಶಾಕ್ ಎದುರಾಗಿದೆ.
ವಾರದ ಎಲ್ಲಾ ದಿನವೂ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಸರ್ಕಾರವೇ ಉದ್ಯಾನ ನಗರಿ ಸೌಂದರ್ಯ ನಾಶಕ್ಕೆ ಮುಂದಾಯಿತೆ? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಸಂಚಾರ ದಟ್ಟಣೆಯನ್ನು ನಿಯಂತ್ರಗೊಳಿಸಲು ಸಂಚಾರಿ ಇಲಾಖೆ ಸರ್ಕಾರಕ್ಕೆ ಅವಾಶ ನೀಡುವಂತೆ ಮನವಿ ಮಾಡಿತ್ತು. ಈ ಬೇಡಿಕೆಗೆ ಮಾನ್ಯತೆ ನೀಡಿರುವ ಸರ್ಕಾರ, ತಿಂಗಳ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಸೇರಿ ಎಲ್ಲಾ ರಜೆ ದಿನಗಳಲ್ಲೂ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರಿನ ಗಾರ್ಡನ್ ಸಿಟಿ ಕಲ್ಪನೆಗೆ ದೊಡ್ಡ ಆಸ್ತಿಯಾಗಿದ್ದ ಕಬ್ಬನ್ ಪಾರ್ಕ್ ಕೂಡ ಇನ್ನು ಮುಂದೆ ವಾಹನಗಳ ಸಂಚಾರದಿಂದ ತತ್ತರಿಸಿ ಹೋಗಲಿದೆ. ಈ ಹಿಂದೆ ಸರ್ಕಾರ, 2016ರಲ್ಲಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಮತ್ತು ಎಲ್ಲಾ ಸರ್ಕಾರಿ ರಜಾ ದಿನಗಳಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿತ್ತು. ಆ ವೇಳೆ ಕೇವಲ ನಡಿಗೆದಾರರಿಗೆ ಕಬ್ಬನ್ ಪಾರ್ಕ್ನೊಳಗೆ ಎಂಟ್ರಿ ಕೊಡಲಾಗಿತ್ತು. ಅಂದಿನಿಂದ ಇಂದಿನ ತನಕ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ಆದರೆ, ಕಬ್ಬನ್ ಪಾರ್ಕ್ ನೊಳಗೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುವುದರಿಂದ ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಹೆವಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಸಂಚಾರ ಇಲಾಖೆ ದೂರ ನೀಡಿತ್ತು. ಹೀಗಾಗಿ ಜ. 23ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಸಂಚಾರ ಇಲಾಖೆಯ ಮನವಿ ಪುರಸ್ಕರಿಸಿದ ಸರ್ಕಾರ, 2ನೇ, 4ನೇ ಶನಿವಾರ ರಾತ್ರಿ 7 ಗಂಟೆಯಿಂದ 10 ಗಂಟೆ ತನಕ ಅವಕಾಶ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾನುವಾರ ಸೇರಿದಂತೆ ಎಲ್ಲ ರಜಾ ದಿನಗಳಲ್ಲೂ ವಾಹನ ಸಂಚಾರ ಮಾಡಬಹುದು ಎಂದಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಪರಿಸರ ಸ್ನೇಹಿಗಳು ವಿರೋಧಿಸುತ್ತಿದ್ದಾರೆ. ಸರ್ಕಾರ ನಡೆ ಖಂಡಿಸಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಸ್ ತಿಳಿಸಿದ್ದಾರೆ.