ಗಾರ್ಡನ್ ಸಿಟಿಯಲ್ಲಿ ಮರಗಳ ಮಾರಣಹೋಮವನ್ನು ಮಾಡಲಾಗಿದೆ. ಅಭಿವೃದ್ಧಿ ಹೆಸರಲ್ಲಿ ನೂರಾರು ಮರಗಳು ನಾಶ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈಲ್ವೇ ಕಮರ್ಷಿಯಲ್ ಪ್ರಾಜೆಕ್ಟ್ ಗಾಗಿ 368 ಮರಕ್ಕೆ ಕತ್ತರಿ ಹಾಕಲಾಗಿದೆ. ಈ ಹಿಂದೆ ಬಿಬಿಎಂಪಿಯಿಂದ ಸಾರ್ವಜನಿಕ ವಾಣಿಜ್ಯ ಉದ್ಧೇಶದಿಂದ ಮರಗಳನ್ನು ಕಡಿಯುತ್ತಿರುವುದಾಗಿ ನೋಟಿಫಿಕೇಶನ್ ನೀಡಲಾಗಿದೆ. ಆಕ್ಷೇಪ ಅಥವಾ ವಿರೋಧಗಳು ಇದ್ದಲ್ಲಿ ವ್ಯಕ್ತಪಡಿಸಲು ಆಹ್ವಾನವನ್ನು ಕೂಡ ಕೊಡಲಾಗಿತ್ತು. ಇದೀಗ ಬಿಬಿಎಂಪಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಗ್ರೀನ್ ಸಿಟಿಯಲ್ಲಿ ಇದೆಂಥಾ ನಿರ್ಧಾರ.? ಅಭಿವೃದ್ಧಿ ಹೆಸರಿನಲ್ಲಿ ಇಷ್ಟೊಂದು ಮರಗಳ ಕಡಿಯುವುದು ಅಗತ್ಯನಾ? ಏಂದೆಲ್ಲಾ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.