ಉಡುಪಿ: ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್ಎಸ್ಯುಐ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಮಾತಿನ ಮೇಲೆ ನಿರ್ಬಂಧ ಹೇರಲಾಗಿದೆ. ಸೂಲಿಬೆಲೆ ನೆಲ ಜಲ ಪರಿಸರ ಅರಣ್ಯ ನೀರಿನ ಬಗ್ಗೆ ಕಾಳಜಿ ಇರುವವರು. ರಾಷ್ಟ್ರೀಯ ವಿಚಾರದ ಬಗ್ಗೆ ಸ್ಪಷ್ಟವಾದ ನಿಲುವಿರುವ ವ್ಯಕ್ತಿ . ಅವರ ಮಾತನ್ನು ನಿರ್ಬಂಧಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಪಾಕಿಸ್ತಾನಕ್ಕೆ ಜೈ ಎಂದವರ ನಡುವೆ ಸೂಲಿಬೆಲೆ ದೇಶಕ್ಕೆ ಜೈ ಎನ್ನುವ ವ್ಯಕ್ತಿ. ಜನತಂತ್ರ ವ್ಯವಸ್ಥೆಯಲ್ಲಿ ಟಿಕೆ- ಟಿಪ್ಪಣಿಗಳನ್ನು ಸ್ವಾಗತಿಸಬೇಕು. ಯಾರು ಆರೋಪ ಮಾಡಿದರೂ ಅದಕ್ಕೆ ಸ್ಪಷ್ಟನೆ ನೀಡಬಹುದು.
ಸೂಲಿಬೆಲೆ ಮಾತನಾಡಿದ ಮೇಲೆ ಅವರ ಮಾತಿಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಆದರೆ, ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.