ಬೆಂಗಳೂರು: ಈಗ ದುನಿಯಾ ಬಲು ದುಬಾರಿಯಾಗಿದೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ದುಬಾರಿ ದುನಿಯಾ ಜನರನ್ನೀಗ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಲವು ಬೆಲೆ ಏರಿಕೆಯ ಮಧ್ಯೆ ಈಗ ಮತ್ತೊಂದು ಬೆಲೆ ಏರಿಕೆಯಾಗುತ್ತಿದೆ.
ಹಾಲು, ಮೊಸರಿನ ಬೆನ್ನಲ್ಲೇ ಇದೀಗ ತೈಲ ದರವೂ ಕೈ ಸುಡುತ್ತಿದೆ. ಹೀಗಾಗಿಯೇ ಶೀಘ್ರವೇ ಪ್ರಯಾಣಿಕರಿಗೆ ಬರೆ ಬೀಳೋದು ಶತಸಿದ್ಧವಾಗಿದೆ. ಡೀಸೆಲ್, ಪೆಟ್ರೋಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಸೋರಿಗೆ ಬಿಗ್ ಶಾಕ್ ಸಿಕ್ಕಂತಾಗಿದೆ. ತೈಲ ದರ ಏರಿಕೆ ಹೊರೆ ನಿಭಾಯಿಸಲು ಪರದಾಡ್ತಿರೋ ಖಾಸಗಿ ಬಸ್ ಮಾಲೀಕರು ದರ ಏರಿಕೆಯ ನಿರ್ಧಾರಕ್ಕೆ ಮುಂದಾಗಿದ್ದಾರೆ. ಶೇಕಡಾ 15 ರಷ್ಟು ದರ ಏರಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರವೇ ನೂತನ ದರಗಳು ಗ್ರಾಹಕರ ಜೇಬಿಗೆ ಬರೆಹಾಕೋದು ಪಕ್ಕಾ ಆಗಿದೆ.
ತೈಲ ದರ ಏರಿಕೆ ಬೆನ್ನಲ್ಲೇ ಸಭೆ ನಡೆಸಿದ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಶೇ 15ರಷ್ಟು ದರ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಖಾಸಗಿ ಬಸ್ ಪ್ರಯಾಣ ದರ ಕಾಲ ಸನ್ನಿಹಿತವಾಗಿದೆ.