ಸೆಪ್ಟೆಂಬರ್ ಕ್ರಾಂತಿನೂ ಇಲ್ಲಾ, ಸಿಎಂ ಬದಲಾವಣೆಯೂ ಇಲ್ಲಾ ಅಂತಾ ಶಾಸಕ ಬಸವರಾಜ ರಾಯರೆಡ್ಡಿ ಗುಡುಗಿದ್ದಾರೆ.
ರಾಜಣ್ಣ ಹೇಳಿದಂಥಾ ಯಾವ ಬದಲಾವಣೆಯೂ ನಡೆಯೋದಿಲ್ಲ, ಇನ್ನು ಸಿಎಂ ಬದಲಾವಣೆ ಅನ್ನೋದಾದ್ರೆ ಅವರನ್ನ ಬದಲಿಸೋರು ಯಾರು. ನಾವೆಲ್ಲಾ ಶಾಸಕರೇ ಅಲ್ವಾ, ನಾನೂ ಕೂಡಾ ಒಬ್ಬ ಓಟರ್, ಹಾಗಿದ್ರೆ ನನ್ನ ಬೆಂಬಲ ಸಿದ್ದರಾಮಯ್ಯರ ಪರವಿದೆ. ಹೀಗಿದ್ದಾಗ ಇನ್ನೆಂಥಾ ಬದಲಾವಣೆ ಅಂತಾ ರಾಯರೆಡ್ಡಿ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲಾ, ಸಿದ್ದರಾಮಯ್ಯ ಮೊದಲಿನಷ್ಟು ಖಡಕ್ ಆಗಿಲ್ಲ ನಿಜ. ಅವರಿಗೂ ವಯಸ್ಸಾಯ್ತಲ್ಲಾ, ಪವರ್ ಸೆಂಟರ್ ಗಳ ಮಾತು ಕೇಳಬೇಕಾಗಿದೆ. ಹಾಗಂತಾ ಅವರೇನು ವೀಕ್ ಸಿಎಂ ಅಲ್ಲವೇ ಅಲ್ಲಾ ಅಂತಾ ಬೆಂಗಳೂರಲ್ಲಿ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ, ನಾವೆಲ್ಲಾ ಈಗಾಗಲೇ ಸಿದ್ದರಾಮಯ್ಯರಿಗೆ ಹೇಳಿದ್ದೇವೆ, ಮೊದಲಿನಂತೆ ಖಡಕ್ ಆಡಳಿತ ನಡೆಸಿ ಅಂತಾ. ಹಾಗಂತಾ ನಾವೇನು ಹೇಳದೆ ಸುಮ್ಮನೆ ಕೂತಿಲ್ಲ ಅವರನ್ನ ಸ್ಟ್ರಾಂಗ್ ಮಾಡ್ತೀವಿ ಅಂತಾ ರಾಯರೆಡ್ಡಿ ತಿಳಿಸಿದ್ದಾರೆ.