ನಂದಿ ಬೆಟ್ಟದಿಂದ ವಿಧಾನಸೌದಕ್ಕೆ ಸಚಿವ ಸಂಪುಟ ಸ್ಥಳಾಂತರ ಹಿನ್ನೆಲೆ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಬೇಡಿಕೆಗಳು ಹೆಚ್ಚಾಗಿದ್ದವು. ನೀಡಿರುವ ಎಲ್ಲ ಮನವಿಗಳು ಹಣಕಾಸು ಇಲಾಖೆಯಲ್ಲಿ ಅನುಮೋದನೆ ಆಗಬೇಕಿತ್ತು. ನಾವೇ ಮೀಟಿಂಗ್ ಮಾಡಿ ಸಂಪುಟ ಸಭೆ ಮುಂದಕ್ಕೆ ಹಾಕಿ ಎಂದು ಹೇಳಿದ್ದೇವು. ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ಮಾಡುವುದಕ್ಕೆ ಸಿದ್ಧ ಇತ್ತು.
ಸಭೆಯಲ್ಲಿ ಕಡಿಮೆ ವಿಚಾರಗಳು ಮಂಡನೆ ಆಗುತ್ತಿದ್ದವು. ಸಮಯ ಕಡಿಮೆ ಇತ್ತು. ನಿನ್ನೆ ನಡೆದ ಸಭೆಯಲ್ಲಿ ನಮ್ಮ ಬಯಲುಸೀಮೆ ಜಿಲ್ಲೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಮ್ಮ ಜಿಲ್ಲೆಯ ವಿಚಾರಗಳು ನಂದಿ ಬೆಟ್ಟದಲ್ಲಿ ಚರ್ಚೆ ಮಾಡೋಣ ಎಂದಿದ್ದಾರೆ.