ಅಚ್ಚರಿಯಾದರು ಇದು ಸತ್ಯ. ಪಾಪರ್ ಪಾಕಿಸ್ಥಾನದ ಪಾಪದ ಕೆಲಸಗಳಿಗೆ ಬೆಲೆ ತೆರುವ ಕಾಲ ಸನ್ನಿಹಿತವಾಗುತ್ತಿದೆ. ಇಂತಹ ಸಂದರ್ಭದಲ್ಲೇ ನೆರೆ ರಾಷ್ಟ್ರದ ಹಕೀಕತ್ತು ಜಗತ್ತಿನ ಮುಂದೆ ಬಟಾಬಯಲಾಗಿದೆ. ಅಣ್ವಸ್ತ್ರ ಉಪಯೋಗಿಸುತ್ತೀವಿ. ಭಾರತವನ್ನೇ ಕಬ್ಜಾ ಮಾಡುತ್ತೀವಿ ಅಂತೆಲ್ಲಾ ಹೇಳಿಕೊಂಡು ತೀರುಗಾಡುತ್ತಿರುವ ಪಾಕ್ ಸಂಪೂರ್ಣ ಹಲ್ಲುಕಿತ್ತ ಹಾವು ಎನ್ನುವುದು ಸತ್ಯ.
ಹೌದು! ಪಾಕಿಸ್ತಾನ ಭಾರತದೊಟ್ಟಿಗೆ ಯುದ್ಧಕ್ಕೆ ನಿಂತರೆ ಕೇವಲ 4 ದಿನ ಅಂದ್ರೆ 96 ಗಂಟೆಯಲ್ಲಿ ಮಂಡಿಯೂರಿ ಕೂರಬೇಕುತ್ತೆ. ಇದಕ್ಕೆ ಕಾರಣ ಪಾಕಿಸ್ಥಾನದ ಕೋಠಿ ಸಂಪೂರ್ಣ ಖಾಲಿಯಾಗಿದೆ. ಪಾಕ್ ನಲ್ಲಿರುವ ಕಾರ್ಖಾನೆಗಳಿಂದ ಹೆಚ್ಚಿನ ಉತ್ಪಾದನೆ ಮಾಡಲು ಆರ್ಥಿಕ ಸಂಕಷ್ಟ ತೊಡಕಾಗುತ್ತಿದೆ. ಪಾಕ್ ನ ಪ್ರಮುಖ ಅಸ್ತ್ರ ಎಂ 109 ಹೋವಿಡ್ಜರ್ ಗಳಿಗೆ 155 ಎಂಎಂ ಶೆಲ್ ಗಳು ಮತ್ತು ಬಿಎಂ 21 ಸಿಸ್ಟಂಗಳಿಗೆ 122 ಎಂಎಂ ಕಾರೆಟ್ ಗಳ ಕೊರತೆ ಅಪಾರವಾಗಿ ಕಾಡ್ತಿದೆ. ಉಕ್ರೇನ್ ಗೆ ಪಾಕ್ 155 ಎಂಎಂ ನ ಆರ್ಟಿಲರಿಗಳನ್ನು ಪೂರೈಸಿದ್ದೇ ಇದಕ್ಕೆ ಕಾರಣ.
ಉಕ್ರೇನ್ ಗೆ ಶಸ್ತ್ರಾಸ್ತ್ರ ಧಾರೆ ಎರೆದ ಪಾಕ್
ರಷ್ಯಾ ಉಕ್ರೇನ್ ಯುದ್ಧದಲ್ಲಿ ಪಾಕಿಸ್ಥಾನದಿಂದ ಮದ್ದು, ಗುಂಡುಗಳು ಪೂರೈಕೆಯಾಗಿವೆ. ಹೌದು, ಉಕ್ರೇನ್ ಗೆ ಪಾಕ್ ತನ್ನೆಲ್ಲಾ ಯುದ್ಧ ಸಲಕರಣೆಗಳನ್ನು ಧಾರೆಯೆರೆದಿದೆ. ಪರಿಣಾಮ ಪಾಕ್ ಶಸ್ತ್ರಾಗಾರ ಬಣಗುಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಪಾಕ್ ಮದ್ದು, ಗುಂಡುಗಳ ಪೂರೈಕೆ ವಿಚಾರವಾಗಿ ಉಕ್ರೇನ್, ಇಸ್ರೇಲ್, ಟರ್ಕಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಈ ದಾಸ್ತಾನು ಪೂರೈಕೆಯಾಗಲು ಇನ್ನು ಕೆಲ ವರ್ಷಗಳೇ ಬೇಕಾಗಬಹುದು. ಹಾಗಾಗಿ ಪಾಕ್ ಬಳಿ ಶಸ್ತ್ರಾಸ್ತ್ರಗಳಿದ್ದು, ಅವುಗಳೆಲ್ಲಾ ಮದ್ದು, ಗುಂಡುಗಳಿಲ್ಲದೆ ಕೇವಲ ಶೋ ಪೀಸ್ ಗಳಾಗಿವೆ.
ಭಾರತದ ಬತ್ತಳಿಕೆ ಸೇರಿದ ಅತ್ಯಾಧುನಿಕ ಏರ್ ಶಿಪ್
ಭಾರತೀಯ ಸೇನೆಗೆ ನೂರಾನೆ ಬಲ ನೀಡುವಂತಹ ಅಸ್ತ್ರವೊಂದನ್ನು ಡಿಆರ್ ಡಿಒ ಶೋಧಿಸಿದೆ. ಭೂಮಿಯಿಂದ 20 ಕಿಲೋಮೀಟರ್ ಎತ್ತರದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಡುವ ದೈತ್ಯ ಬೇಹುಗಾರಿಕಾ ಬಲೂನನ್ನು ಡಿಆರ್ ಡಿಎ ಮಧ್ಯಪ್ರದೇಶದ ಶ್ಯೂಪುರ್ ನಲ್ಲಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ದೀರ್ಘಾವಧಿವರೆಗೂ ಬಾನಲ್ಲೇ ನೆಲೆ ನಿಲ್ಲುವ ಆ ಏರ್ ಶಿಪ್ ನಿರಂತರವಾಗಿ ಶತ್ರುಗಳ ಚಲನವಲನಗಳನ್ನು ರವಾನಿಸಲಿದೆ. ಶನಿವಾರ ಇದರ ಪ್ರಯೋಗ ನಡೆದಿದ್ದು, ಪಾಕಿಸ್ತಾನ ವಿರುದ್ಧ ಈ ಅಸ್ತ್ರವನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.
ವಾಯುಪಡೆ ಮುಖ್ಯಸ್ಥರಿಗೆ ಮೋದಿ ಸೂಚಿಸಿದ್ದೇನು?
ದೆಹಲಿಯ ತಮ್ಮ ನಿವಾಸಕ್ಕೆ ವಾಯು ಸೇನೆ ಮುಖ್ಯಸ್ಥರನ್ನು ಕರೆಸಿಕೊಂಡಿದ್ದ ಮೋದಿ ಕೆಲ ಗಂಟೆಗಳ ಕಾಲ ವಿಸ್ತೃತ ಚರ್ಚೆ ನಡೆಸಿದ್ದಾರೆ. ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ರೊಟ್ಟಿಗಿನ ಚರ್ಚೆಯಲ್ಲಿ ವಾಯು ದಾಳಿಯ ಸಾಧಕ ಬಾಧಕಗಳನ್ನು ಚರ್ಚಿಸಲಾಗಿದೆ. ಪಾಕಿಸ್ತಾನದ ಪ್ರಮುಖ ವಾಯು, ನೌಕಾ, ಭೂಸೇನಾ ನೆಲೆಗಳನ್ನೇ ಟಾರ್ಗೆಟ್ ಮಾಡಿದ್ರೆ ಹೇಗೆ ಅನ್ನೋದರ ಬಗ್ಗೆ ಉಭಯರು ಸಮಾಲೋಚಿಸಿದ್ದಾರೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ನಿಮ್ಮಲ್ಲೆರ ಇಚ್ಛೆಗಳನ್ನು ಪರಿಪೂರ್ಣಗೊಳಿಸುವ ನಾಯಕತ್ವ ಗುಣ ಮೋದಿಯವರಿಗೆ ಮಾತ್ರ ಇದೆ ಅನ್ನೋ ಮೂಲಕ ಪ್ರತೀಕಾರದ ಸುಳಿವನ್ನು ನೀಡಿದ್ದಾರೆ.