ಪುತ್ತೂರು: ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆಯನ್ನು ಖಂಡಿಸಿ ಮುಸ್ಲಿಂ ಯುವಜನ ಒಕ್ಕೂಟ ಸುದ್ಧಿಗೋಷ್ಠಿಯನ್ನು ನಡೆಸಿತು.
ಈ ವೇಳೆ ಮುಸ್ಲಿಂ ಯುವಜನ ಒಕ್ಕೂಟ ಸದಸ್ಯ ಅಶ್ರಫ್ ಕಲ್ಲೇಗ ಮಾತನಾಡಿ ರಾಜ್ಯದಲ್ಲಿ ಒಬ್ಬ ನಾಲಾಯಕ್ ಗೃಹಸಚಿವರಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವೇ ಇಲ್ಲ. ಇನ್ನೊಬ್ಬರು ಅತಿಥಿ ಉಸ್ತುವಾರಿ ಸಚಿವರು. ಅವರು ಜಿಲ್ಲೆಗೆ ಅತಿಥಿ ಉಪನ್ಯಾಸಕರ ರೀತಿಯಲ್ಲಿ ಆಗಮಿಸುತ್ತಾರೆ. ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಬಳಿಕ ಹಲವು ಕಡೆಗಳಲ್ಲಿ ದ್ವೇಷ ಭಾಷಣವನ್ನು ಮಾಡಲಾಗಿದೆ. ಈ ದ್ವೇಷ ಭಾಷಣವನ್ನು ಮಾಡಿದವರ ಮೇಲೆ ಶಿಸ್ತು ಕ್ರಮ ಮತ್ತು ಬಂಧಿಸುವ ಕಾರ್ಯ ನಡೆದಿಲ್ಲ.
ಸ್ಪೀಕರ್ ಯು.ಟಿ.ಖಾದರ್ ಜಿಲ್ಲೆಯಲ್ಲಿ ಹೊಂದಣಿಕ ರಾಜಕಾರಣ ಮಾಡುತ್ತಿದ್ದಾರೆ. ಸ್ಪೀಕರ್ ಇದ್ದೂ ಜಿಲ್ಲೆಯಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. ಸರ್ಕಾರ ಈ ಕೋಮುವಾದಿಗಳ ಜೊತೆಗೆ ಸೇರಿಕೊಂಡಿದೆ ಎನ್ನುವ ಅನುಮಾನ ಮೂಡುತ್ತಿದೆ. ಸರ್ಕಾರ ಮುಸ್ಲಿಮರಿಗೆ ನೀಡಿದ ಎಲ್ಲಾ ಬಿಟ್ಟಿ ಭಾಗ್ಯ ಹಿಂಪಡೆಯಲಿ,ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಮಾತ್ರ ಅವಕಾಶ ಮಾಡಿಕೊಡಲಿ ಎಂದು ಸರ್ಕಾರದ ವಿರುದ್ಧ ಅಶ್ರಫ್ ಕಲ್ಲೇಗ ಕಿಡಿಕಾರಿದರು.