ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಉಂಟಾದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಕೆಎಸ್ ಸಿಎ ಧಿಕಾರಿಗಳ ದರ್ಬಾರ್ ಗೆ ಈಗ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕೆಎಸ್ ಸಿಎ ಸಂಸ್ಥೆ ಮೇಲೆ ಅನೇಕ ಅರೋಪಗಳು ಕೇಳಿ ಬಂದಿವೆ. ವಿಪಕ್ಷಗಳು ಕೂಡ ಸಂಸ್ಥೆಯ ಲೆಕ್ಕಪತ್ರದ ಬಗ್ಗೆ ಗಂಭೀರ ಆರೋಪ ಮಾಡಿವೆ.
ಕೆಎಸ್ ಸಿಎ ಗೆ ಪ್ರತಿ ವರ್ಷ ನೂರಾರು ಕೋಟಿ ಅದಾಯ ಹರಿದು ಬರುತ್ತದೆ. ನೂರಾರು ಕೋಟಿ ಅದಾಯದಿಂದ ಅಧಿಕಾರಿಗಳು ಅಂದಾ-ದರ್ಬಾರ್ ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೆಎಸ್ ಸಿಎಗೆ ಆಡಳಿತಾಧಿಕಾರಿ ನೇಮಕ ಮಾಡಲು ಮುಂದಾಗಿದೆ. ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿದೆ ಎಂದು ಹಿರಿಯ ಅಧಿಕಾರಿಗಳು ಕರ್ನಾಟಕ ನ್ಯೂಸ್ ಬೀಟ್ ಗೆ ಮಾಹಿತಿ ನೀಡಿವೆ.