ಬೆಂಗಳೂರಿನಲ್ಲಿ ನಡೆಯಲಿರುವ ಇಂದಿನ ಐಪಿಎಲ್ ಪಂದ್ಯ ರಣರೋಚಕ ಕುತೂಹಲ ಕೆರಳಿಸಿದೆ.
ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ, ಚೆನ್ನೈ ಐಪಿಎಲ್ ನಿಂದ ಹೊರಬಿದ್ದಾಗಿದೆ. ಆದರೆ ಇಂದಿನ ಪಂದ್ಯ ಚೆನ್ನೈ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಕಡೆಯದ್ದಾಗಲಿದೆಯಾ ಎನ್ನಲಾಗುತ್ತಿದೆ.. ಮುಂದಿನ ವರ್ಷ ಧೋನಿ ಐಪಿಎಲ್ ಆಡುವುದು ಅನುಮಾನ. ಹೀಗಾಗಿ ಇಂದಿನ ಪಂದ್ಯದಲ್ಲೇ ಅಧಿಕೃತವಾಗಿ ಧೋನಿ-ಕೊಹ್ಲಿ ಕಡೆಯ ಬಾರಿಗೆ ಪರಸ್ಪರ ಎದುರಾಗುತ್ತಿದ್ದಾರೆ.
ಇಂಥದ್ದೊಂದು ಅಪರೂಪದ ಪಂದ್ಯಕ್ಕಿವತ್ತು ಬೆಂಗಳೂರು ಸಾಕ್ಷಿಯಾಗುತ್ತಿದೆ. ಅಷ್ಟೇ ಅಲ್ಲಾ, ಧೋನಿ ಬೆಂಗಳೂರಿನಲ್ಲೇ ಐಪಿಎಲ್ ಗೆ ವಿದಾಯ ಹೇಳ್ತಾರಾ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.