ತಮ್ಮ ನಗುವಿನಿಂದಲೇ ಕರ್ನಾಟಕದ ಮನೆ, ಮನಗಳ ಮಾತಾಗಿದ್ದ ಅಪರೂಪದ ಕಲಾವಿದ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ.
ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ 3ರ ವಿನ್ನರ್ ಆಗಿದ್ದ ರಾಕೇಶ್ ಕಳೆದ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೂಲತ ಉಡುಪಿ ಜಿಲ್ಲೆಯವರಾದ ರಾಕೇಶ್ ಕಳೆದ ರಾತ್ರಿ ಕಾರ್ಕಳದ ನಿಟ್ಟೆಗೆ ಮದುವೆ ಕಾರ್ಯಕ್ರಮಕ್ಕೆ ಅಂತಾ ತೆರಳಿಸಿದ್ದರು. ಆದರೆ, ಕರಾಳ ವಿಧಿ, ಮಧ್ಯರಾತ್ರಿ 2 ಗಂಟೆ ಹೊತ್ತಲ್ಲಿ ಹೃದಯಾಘಾತ ರೂಪದಲ್ಲಿ ಬಂದು ವಕ್ಕರಿಸಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಬದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ವಿಶ್ವರೂಪ್ ಅಂತಲೇ ಖ್ಯಾತರಾಗಿದ್ದ ರಾಕೇಶ್ ಪೂಜಾರಿ ಕಾಮಿಡಿ ಕಿಲಾಡಿ ಮತ್ತು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಮಿಂಚಿದವರು. ಕನ್ನಡದ ಸುದೀಪ್ ನಟನೆಯ ಪೈಲ್ವಾನ, ಇದು ಎಂಥಾ ಲೋಕವಯ್ಯಾ ಸಿನಿಮಾಗಳಲ್ಲಿ ರಾಕೇಶ್ ನಟಿಸಿದ್ದಾರೆ. ತುಳು ಭಾಷೆಯ ಪೆಟ್ಕಮ್ಮಿ, ಅಮೆರ್ ಪೊಲೀಸ್ ಮೊದಲಾದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ರಾಜೇಶ್ ಅಗಲಿಕೆಗೆ ಕಾಮಿಡಿ ಕಿಲಾಡಿ ತಂಡ ಸೇರಿದಂತೆ ಹಿರಿತೆರೆ, ಕಿರುತೆರೆ ಕಲಾವಿದರು ಕಂಬಿನಿ ಮಿಡಿದ್ದಾರೆ.