ದಿ ರೈಸ್ ಆಫ್ ಅಶೋಕ’ ಶೀರ್ಷಿಕೆಯ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಇದೀಗ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಆಕಾಶ್ ಆಡಿಯೋದಲ್ಲಿ ಸಿನಿಮಾದ ಡಬ್ಬಿಂಗ್ ಕೆಲಸ ಕಂಪ್ಲೀಟ್ ಮಾಡಲಾಗಿದೆ.
ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರ ನಿರ್ವಹಿಸಿದ್ದಾರೆ. ಗ್ರಾಮೀಣ ಭಾಗದ ಹಳ್ಳಿ ಹುಡುಗಿಯಾಗಿ ನಟಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ.
ಈ ಕುರಿತು ನಟ ಸತೀಶ್ ನೀನಾಸಂ ಮಾತನಾಡಿ, ನನ್ನ ಜೀವನದಲ್ಲಿ ದಿ ರೈಸ್ ಆಫ್ ಅಶೋಕ ವಿಭಿನ್ನ ಸಿನಿಮಾ. ವರ್ಷಾನುಗಟ್ಟಲೆ ಸಿನಿಮಾಗೋಸ್ಕರ ಕಾದವರು ಬಹಳ ನಟರಿದ್ದಾರೆ. 30 ದಿನಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದ್ದೇವೆ. ಅಂದರೆ ಸಪ್ತಮಿಗೌಡ ನಾನು ನೋಡಿರುವ ಹೀರೋಯಿನ್ ಗಳಲ್ಲಿ ಬೆಸ್ಟ್ ಹೀರೋಯಿನ್ ಎಂದಿದ್ದಾರೆ.
ತನ್ನ ಪಾತ್ರದ ಕುರಿತು ನಟಿ ಸಪ್ತಮಿಗೌಡ ಮಾತನಾಡಿ, ಅಂಬಿಕಾ ಪಾತ್ರ ಬಹಳ ಎಮೋಶನ್. ನನಗೆ ಬಹಳ ಕನೆಕ್ಟ್ ಆಗಿದೆ. ಡೈಲಾಗ್ ಬಹಳ ಸುಲಭ ಇದೆ. ಸತೀಶ್ ನೀನಾಸಂ ಲೈಫ್ ನ ಬಿಗ್ ಬಜೆಟ್ ಮೂವಿ ಇದಾಗಿದ್ದು ಅವರ ಕನಸುಗಳು ಈ ಮೂಲಕ ಈಡೇರಬೇಕು. ಸಮಾಜದ ಹೆಣ್ಣು ಮಕ್ಕಳ ಪರವಾಗಿ ನನ್ನ ಪಾತ್ರ ಇದೆ. ಅಂಬಿಕಾ ಎಲ್ಲರನ್ನೂ ಪ್ರಶ್ನೆ ಮಾಡುತ್ತಾಳೆ. ಹಳ್ಳಿ ಸೊಗಡಿನ ಹುಡುಗಿಯ ಪಾತ್ರದಲ್ಲಿ ನಾನು ನಟಿಸಿರುವೆ. ಸಮಾಜಕ್ಕೆ ಹೆಣ್ಣು ಮಕ್ಕಳು ಏನೇ ಪ್ರಶ್ನೆ ಮಾಡಿದರೂ ಬೇರೆ ರೀತಿ ಟರ್ನ್ ಪಡೆದುಕೊಳ್ಳುತ್ತೆ ಎಂದಿದ್ದಾರೆ.
ಒಟ್ಟಿನಲ್ಲಿ ಸತೀಶ್ ನೀನಾಸಂ ಈಗಾಗಲೇ ಅಶೋಕ ಬ್ಲೇಡ್ ಎಂಬ ಸಿನಿಮಾದ ಟೈಟಲ್ ಚೇಂಜ್ ಮಾಡಿಕೊಂಡು, ಇದೀಗ ದಿ ರೈಸ್ ಆಫ್ ಅಶೋಕ ಎಂಬ ಟೈಟಲ್ ಮೂಲಕ ಚಿತ್ರವನ್ನು ಮತ್ತೆ ಮುನ್ನಲೆಗೆ ತಂದು, ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ತನ್ನ ಕನಸು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದ್ದಾರೆ..ದಿ ರೈಸ್ ಆಫ್ ಅಶೋಕ ತೆರೆ ಮೇಲೆ ಹೇಗೆ ಮೋಡಿ ಮಾಡುತ್ತೆ ಕಾದುನೋಡಬೇಕಾಗಿದೆ.