ದೊಡ್ಡ ಬದಲಾವಣೆ ಏನೂ ಇಲ್ಲ ಆದ್ರೆ ಸಚಿವರ ಬದಲಾವಣೆ ನಿಶ್ಚಿತ ಅಂತಾ ರಾಜಣ್ಣ ಹಚ್ಚಿರುವ ಬೆಂಕಿಗೆ ಸಚಿವ ಸತೀಶ್ ಜಾರಕಿಹೊಳಿ ಇನ್ನೊಂದೆಡೆಯಿಂದ ತುಪ್ಪ ಸುರಿದಿದ್ದಾರೆ.
ಸಿಎಂ ಜೊತೆ ದೆಹಲಿಗೆ ಹೋಗಿದ್ದ ಜಾರಕಿಹೊಳಿ, ವಾಹಸ್ ಆಗ್ತಿದ್ದಂತೆ ಸಂಪುಟ ಪುನಾರಚನೆಯ ಸುಳಿವನ್ನು ನೀಡಿದ್ದಾರೆ. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ದೊಡ್ಡ ಬಿರುಗಾಳಿ ಬೀಸುತ್ತೆ ಅಂತಾ ರಾಜಣ್ಣ ಸುಳಿವು ನೀಡುತ್ತಿರುವಾಗಲೇ, ಸತೀಶ್ ಜಾರಕಿಹೊಳಿ ಕೂಡಾ ಸಂಪುಟ ಪುನಾರಚನೆಯ ಮುನ್ಸೂಚನೆ ನೀಡಿದ್ದಾರೆ.