ಈ ಬಾರಿಯ ಯುಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡಿಗರು ಪರಾಕ್ರಮ ಮೆರೆದಿದ್ದಾರೆ. ಈ ಸಾಲಿನಲ್ಲಿ ರಾಜ್ಯದ ಒಟ್ಟು 29 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಅದರಲ್ಲೂ ಟಾಪ್ 25ರ ಪಟ್ಟಿಯಲ್ಲಿ ಕರುನಾಡಿನ ಆರ್ ರಂಗ ಮಂಜು 24 ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಉಳಿದಂತೆ, ಬಸವರಾಜ್ ಗುತ್ತೂರು 41, ಬಿಎಂ ಮೇಘಾ 425, ಭರತ್ ಸಿ ಯಾರಂ 567, ಡಾ ಭಾನು ಪ್ರಕಾಶ್ 523, ನಿಖಿಲ್ ಎಂ ಆರ್ 724, ಹನುಮಂತಪ್ಪ ನಂದಿ 910ಹಾಗೂ ಮೋಹನ್ ಪಾಟೀಲ್ 984 ನೇ ರ್ಯಾಂಕ್ ಗಿಟ್ಟಿಸಿದ್ದಾರೆ.
ರ್ಯಾಂಕ್ ಗಳಿಸಿದ ಕನ್ನಡಿಗರು
ಆರ್. ರಂಗ ಮಂಜು – 24
ಬಸವರಾಜ್ ಗುತ್ತೂರ್ – 41
ಬಿಎಂ ಮೇಘನಾ – 425
ಭರತ್ ಸಿ ಯಾರಂ – 567
ಡಾ. ಭಾನುಪ್ರಕಾಶ್ – 523
ನಿಖಿಲ್ ಎಂಆರ್- 724
ಟಿ. ವಿಜಯ್ ಕುಮಾರ್ – 894
ಹನುಮಂತಪ್ಪ ನಂದಿ – 910
ಮೋಹನ್ ಪಾಟೀಲ್ – 984