ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆಯಾಗುತ್ತಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿಯ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಭದ್ರಾ ನದಿಯ ತೂಗು ಸೇತುವೆ ಆರ್ಭಟಿಸುತ್ತಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೆ ನೆಲ್ಲಿಬೀಡು ಗ್ರಾಮಸ್ಥರು ಪರದಾಟ ನಡೆಸಿದ್ದಾರೆ.
ಸಮರ್ಪಕ ಸೇತುವೆ ನಿರ್ಮಾಣ ಮಾಡುವಂತೆ ದಶಕದಿಂದ ನೆಲ್ಲಿಬೀಡು ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ನದಿ ನೀರು ಏರಿಕೆಯಾದ ಬೆನ್ನಲ್ಲೇ ವಾಹನ ಸಂಚಾರ ಬಂದ್ ಮಾಡಲಾಗಿದೆ. ನಿನ್ನೆ ಮುಂಜಾಗ್ರತೆಯಿಂದ ಕೆಲ ವಾಹನಗಳನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ನಲ್ಲಿ ಸಾಗಿಸಿದ್ದಾರೆ. ಉಳಿದ ವಾಹನಗಳು ಗ್ರಾಮದಲ್ಲೇ ಲಾಕ್ ಮಾಡಲಾಗಿದೆ.