ಹಾಸನ: ಹಾಸನದಲ್ಲಿ ದೇವಾಲಯ ಕಳ್ಳತನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.
ಈಗ ದೇವಸ್ಥಾನದ ಹುಂಡಿ ಕದ್ದೊಯ್ದಿರುವ ಘಟನೆ ಹಾಸನ ಜಿ. ಆಲೂರು ತಾ. ಗಂಜಿಗೆರೆಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಸುಮಾರು 28 ಗ್ರಾಮಗಳಿಂದ ಈ ದೇವಾಲಯವನ್ನು ಪೂಜಿಸಲಾಗುತ್ತದೆ. ಹುಂಡಿ ಕದ್ದು, ಹಣ ದೋಚಿದ ಖದೀಮರು ಗ್ರಾಮದ ಶಾಲೆ ಬಳಿ ಬಿಸಾಡಿ ಹೋಗಿದ್ದಾರೆ. ಕಳೆದ ವಾರದಿಂದಲೂ ಹಾಸನ ಜಿಲ್ಲೆಯ ವಿವಿಧೆಡೆ ದೇವಾಲಯದಲ್ಲಿ ಕಳ್ಳತನ ನಡೆಯುತ್ತಿದೆ. ಶೀಘ್ರ ಕಳ್ಳತನಕ್ಕೆ ಕಡಿವಾಣ ಹಾಕುವಂತೆ ಪೊಲೀಸ್ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.