34 ವರ್ಷಗಳ ಸುದೀರ್ಘ ಸೇವೆಯಲ್ಲಿ ಒಟ್ಟು 57 ಬಾರಿ ವರ್ಗಾವಣೆ ಕಂಡ ಅಧಿಕಾರಿ ಇದೀಗ ನಿವೃತ್ತರಾಗುತ್ತಿದ್ದಾರೆ.
ಹೌದು, 1991ರ ಹರ್ಯಾಣ ಕೇಡರ್ ನ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಇಂದು ವೃತ್ತಿ ಬದುಕನ್ನು ಅಂತ್ಯಗೊಳಿಸುತ್ತಿದ್ದಾರೆ. ಸಾರಿಗೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತಮ್ಮ ಪ್ರಾಮಾಣಿಕ ಮತ್ತು ದಿಟ್ಟ ಕ್ರಮಗಳಿಂದಲೇ ಹೆಸರಾದವರು. 2012ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾವರ್ಟ್ ವಾದ್ರಾಗೆ ಸಂಬಂಧಿಸಿದ ಗುರುಗ್ರಾಮದ ಭೂಮಿ ವರ್ಗಾವಣೆ ಪ್ರಕ್ರಿಯೆ ರದ್ದು ಗೊಳಿಸಿದ್ದ ಖೇಮ್ಕಾ ದೇಶದೆಲ್ಲೆಡೆ ಸುದ್ದಿಯಾಗಿದ್ದರು.
ತಾವೀಗ ನಿರ್ವಹಿಸುತ್ತಿದ್ದ ಹುದ್ದೆಗೂ ಕೇವಲ 4 ತಿಂಗಳ ಹಿಂದಷ್ಟೇ ಅಶೋಕ್ ವರ್ಗವಾಗಿದ್ದರು. ಅಷ್ಟೇ ಅಲ್ಲಾ 2023ರಲ್ಲಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಹರಿಯಾಣ ಸರ್ಕಾರ ಎಡವಿದೆ ಅಂತಾ ಸಿಎಂ ಮನೋಹರ್ ಲಾಲ್ ಖಟ್ಟರ್ ಗೂ ಅವರು ಪತ್ರ ಬರೆದು ಚರ್ಚೆಗೆ ಗ್ರಾಸರಾಗಿದ್ದರು.