ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನದ ಗೊಂದಲ ಇನ್ನೂ ಮುಗಿದಿಲ್ಲ ಎನ್ನಲಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ಮುಂದೆಯೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ್ ಕರಿಕಳ ಬೇಸರ ವ್ಯಕ್ತಪಡಿಸಿದ್ದಾರೆ. ಯು.ಟಿ ಖಾದರ್ ಬಳಿ ಆಡಳಿತ ಸಮಿತಿ ಸದಸ್ಯ ಮಹೇಶ್ ಕರಿಕ್ಕಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಆದೇಶ ಧಿಕ್ಕಾರ ಮಾಡಿದ್ದು ಸುಧೀರ್ ಶೆಟ್ಟಿ ಮತ್ತು ಅಭಿಲಾಷ್ ಎಂದು ಆರೋಪಿಸಿದ್ದಾರೆ. ಅಲ್ಲದೇ, ಅವರಿಬ್ಬರ ವಿರುದ್ಧ ಮಹೇಶ್ ಕರಿಕ್ಕಳ ಆರೋಪಿಸಿದ್ದಾರೆ. ನಂತರ ಮಹೇಶ್ ಅವರನ್ನು ಸ್ಪೀಕರ್ ಯು.ಟಿ. ಖಾದರ್ ಸಮಾಧಾನ ಪಡಿಸಿದರು. ಮಸೀದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ವೀಕರ್ ಯು.ಟಿ.ಖಾದರ್ ಬಂದಿದ್ದ ವೇಳೆ ಈ ಘಟನೆ ನಡೆದಿದೆ.