ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಟ್ರಂಪ್-ಜೆಲೆನ್ ಸ್ಕಿ ಘರ್ಷಣೆ: ಕಿಡಿ ಹೊತ್ತಿಸಿದ್ದು ಭಾರತದ ಅಳಿಯ ಜೆ.ಡಿ.ವ್ಯಾನ್ಸ್!

March 1, 2025
Share on WhatsappShare on FacebookShare on Twitter

ವಾಷಿಂಗ್ಟನ್: ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ನಡುವಿನ ಮಾತುಕತೆ ಸುಗಮವಾಗಿಯೇ ಸಾಗಿತ್ತು. ಉಭಯ ನಾಯಕರ ಹಸ್ತಲಾಘವ ಮತ್ತು ಮುಗುಳ್ನಗೆಯೊಂದಿಗೇ ಮಾತುಕತೆ ಆರಂಭವಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಉಭಯ ನಾಯಕರ ನಡುವೆ ವಾಗ್ವಾದ ಸ್ಫೋಟಗೊಂಡು, ಜಂಟಿ ಪತ್ರಿಕಾಗೋಷ್ಠಿ ರದ್ದಾಗಿ, ಕೊನೆಗೆ ಜೆಲೆನ್ ಸ್ಕಿ ಅವರನ್ನು ಶ್ವೇತಭವನದಿಂದಲೇ ಹೊರಹೋಗುವಂತೆ ಸೂಚಿಸುವಲ್ಲಿಗೆ ಬಂದು ತಲುಪಿತು.

ಅಷ್ಟಕ್ಕೂ ಟ್ರಂಪ್-ಜೆಲೆನ್ ಸ್ಕಿ ನಡುವೆ ಘರ್ಷಣೆಯ ಕಿಡಿ ಹೊತ್ತಲು ಕಾರಣವೇನು, ಅದನ್ನು ಹೊತ್ತಿಸಿದ್ಯಾರು?
ಬೇರಾರೂ ಅಲ್ಲ, ಭಾರತದ ಅಳಿಯ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್!
ಹೌದು, ಸಭೆಯ ಆರಂಭಿಕ 30 ನಿಮಿಷಗಳು ಸೌಹಾರ್ದಯುತ ಮಾತುಕತೆ ಮತ್ತು ಔಪಚಾರಿಕತೆಗೆ ಸಾಕ್ಷಿಯಾದವು. ಟ್ರಂಪ್ ಮಾತುಗಳಿಗೆ ಜೆಲೆನ್ ಸ್ಕಿ ಹೂಂಗುಡುತ್ತಾ ಸರಿಯೆಂದು ತಲೆಯಾಡಿಸುತ್ತಿದ್ದರು. ನಾನು ಅಮೆರಿಕದ ಅಧ್ಯಕ್ಷನಾಗಿ ಇರುತ್ತಿದ್ದರೆ ರಷ್ಯಾ-ಉಕ್ರೇನ್ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ಟ್ರಂಪ್ ಹೇಳಿಕೊಂಡಾಗಲೂ ಜೆಲೆನ್ ಸ್ಕಿ ಸುಮ್ಮನಿದ್ದರು. ಆದರೆ, ಯಾವಾಗ 2022ರ ರಷ್ಯಾ ಆಕ್ರಮಣ ಮತ್ತು ಯುದ್ಧಕ್ಕೆ ಉಕ್ರೇನ್ ಕಾರಣವೆಂದು ದೂಷಿಸಲು ಟ್ರಂಪ್ ಆರಂಭಿಸಿದರೋ, ಆಗ ಜೆಲೆನ್ ಸ್ಕಿ ಮುಖಭಾವ ಬದಲಾಗತೊಡಗಿತು.

ಅಷ್ಟರಲ್ಲೇ, ಸುದ್ದಿಗಾರರೊಬ್ಬರು ಟ್ರಂಪ್ ರನ್ನು ಉದ್ದೇಶಿಸಿ, “ನೀವು ರಷ್ಯಾದ ಪುಟಿನ್ ರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ” ಎಂದು ಪ್ರಶ್ನಿಸಿದರು. ಸಾಮಾನ್ಯವಾಗಿ, ಟ್ರಂಪ್ ಮತ್ತು ಇತರ ವಿಶ್ವ ನಾಯಕರ ನಡುವಿನ ಶ್ವೇತಭವನದ ಸಭೆಗಳ ವೇಳೆ ಮೌನ ವಹಿಸುವ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವರದಿಗಾರರು ಈ ಪ್ರಶ್ನೆ ಕೇಳುತ್ತಿದ್ದಂತೆ ಏಕಾಏಕಿ ಮಧ್ಯಪ್ರವೇಶಿಸಿದರು.

“ಅಮೆರಿಕದಲ್ಲಿ ಕಳೆದ 4 ವರ್ಷಗಳ ಕಾಲ ಇದ್ದ ಅಧ್ಯಕ್ಷರೊಬ್ಬರು ಪತ್ರಿಕಾಗೋಷ್ಠಿಗಳಲ್ಲಿ ಎದ್ದು ನಿಂತು ವ್ಲಾದಿಮಿರ್ ಪುಟಿನ್‌ರನ್ನು ಟೀಕಿಸುವಂತೆ ಮಾತನಾಡುತ್ತಿದ್ದರು. ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡಿ, ದೇಶದ ಹಲವು ಭಾಗಗಳನ್ನು ನಾಶಪಡಿಸಿದರು. ರಾಜತಾಂತ್ರಿಕತೆಯಲ್ಲಿ ತೊಡಗುವ ಮೂಲಕವಷ್ಟೇ ಶಾಂತಿ ಮತ್ತು ಸಮೃದ್ಧಿಯ ಮಾರ್ಗವನ್ನು ಕಂಡುಕೊಳ್ಳಬೇಕು” ಎಂದು ವ್ಯಾನ್ಸ್ ಹೇಳತೊಡಗಿದರು. ಈ ಮಾತು ಕೇಳುತ್ತಿದ್ದಂತೆ ಕೋಪಗೊಂಡ ಜೆಲೆನ್ ಸ್ಕಿ, “ಪುಟಿನ್ ವಿಶ್ವಾಸಾರ್ಹ ವ್ಯಕ್ತಿಯಲ್ಲ” ಎಂದು ವಾದಿಸುತ್ತಾ, ರಷ್ಯಾ ಕ್ರಿಮಿಯಾವನ್ನು ವಶಪಡಿಸಿಕೊಂಡ ನಂತರ 2015 ರಲ್ಲಿ ಸಹಿ ಹಾಕಿದ ಕದನ ವಿರಾಮ ಒಪ್ಪಂದದ ಬಗ್ಗೆ ಉಲ್ಲೇಖಿಸಿದರು.
“ಅವರು (ಪುಟಿನ್) ನಮ್ಮ ದೇಶದ ಭಾಗಗಳನ್ನು, ಪೂರ್ವ ಮತ್ತು ಕ್ರಿಮಿಯಾದ ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೂ ಅವರನ್ನು ಯಾರೂ ತಡೆಯಲಿಲ್ಲ. ಅವರು ತಮ್ಮಿಚ್ಛೆಗೆ ಅನುಸಾರ, ತಮ್ಮ ಮನಸಿಗೆ ಬಂದಂತೆ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ, ದೇಶದ ಹಲವು ಭಾಗಗಳನ್ನು ವಶಕ್ಕೆ ಪಡೆದುಕೊಂಡರು, ಅಮಾಯಕರ ಸಾವಿಗೆ ಕಾರಣರಾದರು. ಇದೆಲ್ಲ ನಿಮಗೆ ತಿಳಿದಿದೆಯೇ?” ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ಈ ಹಂತದಲ್ಲಿ ಭಾವಾವೇಶಕ್ಕೊಳಗಾದಂತೆ ಕಂಡುಬಂದ ಜೆಲೆನ್ ಸ್ಕಿ, ಅಮೆರಿಕ ಉಪಾಧ್ಯಕ್ಷರಿಗೆ ಇತಿಹಾಸದ ಪಾಠ ಮುಂದುವರಿಸುತ್ತಾ, “ಇಷ್ಟೆಲ್ಲ ಆದರೂ, ಪುಟಿನ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದರು. ನಮ್ಮ ಜನರನ್ನು ಕೊಂದರು. ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ, ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಿಲ್ಲ. ಜೆಡಿ, ನೀವು ಯಾವ ರೀತಿಯ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೀರಿ? ನಿಮ್ಮ ಮಾತಿನ ಅರ್ಥವೇನು?” ಎಂದು ಪ್ರಶ್ನಿಸಿದರು.

“ನಾನು ನಿಮ್ಮ ದೇಶದ ವಿನಾಶವನ್ನು ಕೊನೆಗೊಳಿಸುವ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ವ್ಯಾನ್ಸ್ ತಿರುಗೇಟು ನೀಡಿದರು. ಇಬ್ಬರ ನಡುವಿನ ಮಾತಿನ ಚಕಮಕಿ, ಉದ್ವಿಗ್ನತೆ ಉಲ್ಬಣಗೊಳ್ಳಲು ಪ್ರಾರಂಭಿಸುತ್ತಿದ್ದಂತೆ, ವ್ಯಾನ್ಸ್ ಧ್ವನಿ ಎತ್ತರಿಸಿದರು. ಮೂರು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಟ್ರಂಪ್‌ಗೆ ಜೆಲೆನ್ ಸ್ಕಿ “ಅಗೌರವ” ತೋರಿದ್ದಾರೆ ಎಂದು ಆರೋಪಿಸಿದರು.
“ನೀವು ಓವಲ್ ಕಚೇರಿಗೆ ಬಂದು ಅಮೆರಿಕದ ಮಾಧ್ಯಮಗಳ ಮುಂದೆ ದಾವೆ ಹೂಡಲು ಪ್ರಯತ್ನಿಸುವುದು ಅಗೌರವ ಎಂದು ನಾನು ಭಾವಿಸುತ್ತೇನೆ. ವಾಸ್ತವದಲ್ಲಿ ನೀವು ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಹೇಳಬೇಕು” ಎಂದು ವ್ಯಾನ್ಸ್ ನುಡಿದರು.

ಅಷ್ಟರಲ್ಲಿ, ಜೆಲೆನ್ ಸ್ಕಿಯೂ ಸಿಟ್ಟಾಗಿ,”ನೀವು ಎಂದಾದರೂ ಉಕ್ರೇನ್‌ಗೆ ಬಂದಿದ್ದೀರಾ? ನಾವು ಏನೇನು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನೋಡಿದ್ದೀರಾ?” ಎಂದು ಪ್ರಶ್ನಿಸಿದರು.
ಆಗ ವ್ಯಾನ್ಸ್ “ನಾನು ಅಲ್ಲಿಗೆ ಬಂದಿಲ್ಲ. ಆದರೆ, ಅಲ್ಲಿನ ಕಥೆಗಳನ್ನು ಕೇಳಿದ್ದೇನೆ, ನೋಡಿದ್ದೇನೆ. ನೀವು ನಿಮ್ಮ ಬಗ್ಗೆ ಪ್ರಾಪಗಂಡ ಟೂರ್ ಮಾಡಲು ಅಲ್ಲಿಗೆ ಬೇರೆ ಬೇರೆ ನಾಯಕರನ್ನು ಕರೆಸಿಕೊಳ್ಳುತ್ತೀರಿ ಎಂದು ನನಗೆ ತಿಳಿದಿದೆ … ಓವಲ್ ಕಚೇರಿಗೆ ಬಂದು ನಿಮ್ಮ ದೇಶದ ವಿನಾಶವನ್ನು ತಡೆಯಲು ಪ್ರಯತ್ನಿಸುತ್ತಿರುವ ಆಡಳಿತದ ಮೇಲೆ ದಾಳಿ ಮಾಡುವುದು ಗೌರವಯುತ ಎಂದು ನೀವು ಭಾವಿಸುತ್ತೀರಾ?” ಎಂದು ಕೇಳಿದರು.

ಆಗ ಜೆಲೆನ್ ಸ್ಕಿ, “ಉಕ್ರೇನ್ ಯುದ್ಧವು ಮುಂದುವರಿದರೆ ಅದರ ದುಷ್ಪರಿಣಾಮವನ್ನು ಅಮೆರಿಕ ಕೂಡ ಅನುಭವಿಸಲಿದೆ” ಎಂದರು. ಜೆಲೆನ್ ಸ್ಕಿಯವರಿಂದ ಈ ಮಾತು ಹೊರಬೀಳುತ್ತಿದ್ದಂತೆಯೇ, ಅಷ್ಟು ಹೊತ್ತು ಮೌನವಾಗಿ ಇಬ್ಬರ ಜಗಳವನ್ನು ವೀಕ್ಷಿಸುತ್ತಿದ್ದ ಟ್ರಂಪ್ ಮಧ್ಯಪ್ರವೇಶಿಸಿದರು. “ನಾವು ಏನನ್ನು ಅನುಭವಿಸುತ್ತೇವೆ ಎಂದು ನಿರ್ದೇಶಿಸುವ ಸ್ಥಿತಿಯಲ್ಲಿ ನೀವಿಲ್ಲ” ಎಂದು ಜೆಲೆನ್ ಸ್ಕಿ ವಿರುದ್ಧ ಟ್ರಂಪ್ ಕಿಡಿಕಾರಿದರು.

ವ್ಯಾನ್ಸ್ ಮತ್ತೆ ಮಧ್ಯಪ್ರವೇಶಿಸಿ, “ಅಮೆರಿಕ ನಿಮಗೆ ಅಷ್ಟೊಂದು ನೆರವಾಗಿದೆ. ಆದರೆ, ಜೆಲೆನ್ ಸ್ಕಿ ಯುಎಸ್‌ಗೆ ಕೃತಜ್ಞರಾಗಿಲ್ಲ. ನೀವು ಒಮ್ಮೆಯಾದರೂ ಅಮೆರಿಕಕ್ಕೆ ಧನ್ಯವಾದ ಹೇಳಿದ್ದೀರಾ?” ಎಂದು ಪ್ರಶ್ನಿಸಿದರು. ಕೋಪಗೊಂಡ ಜೆಲೆನ್ ಸ್ಕಿ “ಬಹಳಷ್ಟು ಬಾರಿ ಹೇಳಿದ್ದೇನೆ” ಎಂದು ತಿರುಗೇಟು ನೀಡಿದರು. ಸುಮಾರು 3 ನಿಮಿಷಗಳ ಕಾಲ ನಡೆದ ಈ ವಾಗ್ವಾದವು ಕೊನೆಗೆ ಜೆಲೆನ್ ಸ್ಕಿ ಮತ್ತವರ ನಿಯೋಗವು ಶ್ವೇತಭವನದಿಂದ ಹೊರಹೋಗುವಲ್ಲಿಗೆ ಬಂದು ತಲುಪಿತು.

Tags: IndiaTrumpUkraineZilenskyi
SendShareTweet
Previous Post

ಭಾರತ ತಂಡದ ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿದ ಕೆ. ಎಲ್​ ರಾಹುಲ್​

Next Post

ತಾಲಿಬಾನ್​ಗೆ ಪ್ರವಾಸ ಮಾಡಿದ ಅಮೆರಿಕದ ಪೋರ್ನ್​ ನಟಿ ವಿಟ್ನಿ ರೈಟ್!

Related Posts

ಇರಾನ್ ಕ್ಷಿಪಣಿ ದಾಳಿ: ಇಸ್ರೇಲ್ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಹಾನಿ
ವಿದೇಶ

ಇರಾನ್ ಕ್ಷಿಪಣಿ ದಾಳಿ: ಇಸ್ರೇಲ್ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಹಾನಿ

ಇಸ್ರೇಲ್ ಮೇಲೆ ಪಾಕಿಸ್ತಾನದಿಂದ ಅಣ್ವಸ್ತ್ರ ದಾಳಿಯಾಗತ್ತಂತೆ
ವಿದೇಶ

ಇಸ್ರೇಲ್ ಮೇಲೆ ಪಾಕಿಸ್ತಾನದಿಂದ ಅಣ್ವಸ್ತ್ರ ದಾಳಿಯಾಗತ್ತಂತೆ

ಇಸ್ರೇಲ್ ದಾಳಿಗೆ ಮುನ್ನ ಗುಟ್ಟಾಗಿ ಪರಮಾಣು ಬಾಂಬ್ ತಯಾರಿಕೆಗೆ ಸಜ್ಜಾಗಿತ್ತು ಇರಾನ್?
ವಿದೇಶ

ಇಸ್ರೇಲ್ ದಾಳಿಗೆ ಮುನ್ನ ಗುಟ್ಟಾಗಿ ಪರಮಾಣು ಬಾಂಬ್ ತಯಾರಿಕೆಗೆ ಸಜ್ಜಾಗಿತ್ತು ಇರಾನ್?

Donald Trump
ವಿದೇಶ

ಇಸ್ರೇಲ್ ಗೆ ವಾರ್ನಿಂಗ್ ನೀಡಿದ ಟ್ರಂಪ್!

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ
ವಿದೇಶ

ಕ್ಷಣಕ್ಷಣಕ್ಕೂ ತಾರಕಕ್ಕೇರುತ್ತಿದೆ ಇರಾನ್-ಇಸ್ರೇಲ್ ಸಮರ: ಹೊತ್ತಿ ಉರಿಯುತ್ತಿದೆಯಾ ವಿಶ್ವದ ಅತಿ ದೊಡ್ಡ ತೈಲ ನಿಕ್ಷೇಪ

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?
ವಿದೇಶ

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?

Next Post
ತಾಲಿಬಾನ್​ಗೆ ಪ್ರವಾಸ ಮಾಡಿದ ಅಮೆರಿಕದ ಪೋರ್ನ್​ ನಟಿ ವಿಟ್ನಿ ರೈಟ್!

ತಾಲಿಬಾನ್​ಗೆ ಪ್ರವಾಸ ಮಾಡಿದ ಅಮೆರಿಕದ ಪೋರ್ನ್​ ನಟಿ ವಿಟ್ನಿ ರೈಟ್!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ

‘ಐಪಿಎಲ್ ಫ್ಲಡ್‌ಲೈಟ್‌ ಹ್ಯಾಕ್ ಮಾಡಿದ್ದೇವೆ, ಭಾರತದ ಅಣೆಕಟ್ಟುಗಳಿಂದ ನೀರು ಬಿಟ್ಟಿದ್ದೇವೆ’ ಎಂದು ಹೇಳಿ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ!

‘ಐಪಿಎಲ್ ಫ್ಲಡ್‌ಲೈಟ್‌ ಹ್ಯಾಕ್ ಮಾಡಿದ್ದೇವೆ, ಭಾರತದ ಅಣೆಕಟ್ಟುಗಳಿಂದ ನೀರು ಬಿಟ್ಟಿದ್ದೇವೆ’ ಎಂದು ಹೇಳಿ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ!

Recent News

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ

‘ಐಪಿಎಲ್ ಫ್ಲಡ್‌ಲೈಟ್‌ ಹ್ಯಾಕ್ ಮಾಡಿದ್ದೇವೆ, ಭಾರತದ ಅಣೆಕಟ್ಟುಗಳಿಂದ ನೀರು ಬಿಟ್ಟಿದ್ದೇವೆ’ ಎಂದು ಹೇಳಿ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ!

‘ಐಪಿಎಲ್ ಫ್ಲಡ್‌ಲೈಟ್‌ ಹ್ಯಾಕ್ ಮಾಡಿದ್ದೇವೆ, ಭಾರತದ ಅಣೆಕಟ್ಟುಗಳಿಂದ ನೀರು ಬಿಟ್ಟಿದ್ದೇವೆ’ ಎಂದು ಹೇಳಿ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಶ್ರೀರಾಮ್ ವೆಲ್ತ್ -ಸನ್ಲಾಮ್ ಸಹಭಾಗಿತ್ವ: ಬೆಂಗಳೂರಿಗೆ ಜಾಗತಿಕ ಸಂಪತ್ತಿನಲ್ಲಿ ಪರಿಣತಿ

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

ಎಸ್ಐಪಿ ವರ್ಸಸ್ ಲಂಪ್ ಸಮ್ಹೂಡಿಕೆ: ಯಾವುದು ಬೆಸ್ಟ್?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat