ಬೆಂಗಳೂರು: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರುವವರು ಯಾರು ಎಂದು ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಎಸ್ಐಟಿಯಿಂದ ಮುಸುಕುದಾರಿ ಬಂಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಧರ್ಮಸ್ಥಳ ಪ್ರಕರಣ ಪ್ರಾರಂಭವಾದಗಿಂದ ಷಡ್ಯಂತ್ರ ಎಂದು ಹೇಳಿದ್ದೆವು. ಆದರೆ ಸರ್ಕಾರ ಆತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವಪರಿತೆ ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ ಎಸ್ಐಟಿ ತಂಡ ರಚನೆ ಮಾಡಿದರು. ಎಸ್ಐಟಿ ತನಿಖೆಯಿಂದ ಬುರುಡೆ ಬಂತು ಅಷ್ಟೇ. ಸಿಎಂ ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದ್ದು, ಇದನ್ನು ಸಿದ್ದರಾಮಯ್ಯ ವಾಪಸ್ ಕೊಡಲು ಆಗುತ್ತಾ? ಈ ಸರ್ಕಾರದ ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ದರೆ ಮುಗಿದು ಹೋಗುತಿತ್ತು ಎಂದು ಕಿಡಿಕಾರಿದ್ದಾರೆ.
ಅನನ್ಯ ಭಟ್ದು ಸುಳ್ಳು ಎಂದು ಗೊತ್ತಾಗಿದೆ. ಎಲ್ಲರೂ ದುಡ್ಡು ತಗೆದುಕೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರುವವನು ಸಮೀರ್. ಸಮೀರ್ ಇದರ ಸೂತ್ರಧಾರ. ಎಲ್ಲರನ್ನು ಜೊತೆಗಾರದನ್ನಾಗಿ ಮಾಡಿಕೊಳ್ಳುತ್ತಾನೆ, ಪ್ರಗತಿ ಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡುವುದಕ್ಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಎಂದು ಇವರೇ ನಿರ್ಧಾರ ಮಾಡುತ್ತಾರೆ. ಭದ್ರತೆ ಕೊಡಬೇಕು ಎಂದು ಹೇಳುತ್ತಾರೆ. ಸಿಎಂಗೂ ಇರದ ಭದ್ರತೆ 25 ದಿನಗಳು ಮಾಸ್ಕ್ ಮ್ಯಾನ್ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ಟರು, ಯಾಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ಮಂಜುನಾಥ್ನನ್ನು ಅವಹೇಳನ ಮಾಡಬೇಕು, ಇದು ಮತಾಂತರ ಷಡ್ಯಂತ್ರ. ಇಲ್ಲ ಎಂದರೆ ಸಾಬಿ ಸಮೀರ್ ಯಾಕೆ ಬರುತ್ತಾರೆ? ಧರ್ಮಸ್ಥಳದ ಬಗ್ಗೆ ಕೇಳುವುದಕ್ಕೆ ಇವರು ಯಾರು? ಬೇಕಾದ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದರೂ ಮಸೀದಿ ಅಗೆದರಾ? ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ ಬ್ಯಾಂಕ್ಗೆ ಮಾತಾಡುತ್ತಿದ್ದಾರೆ ಅಷ್ಟೇ. ಇಷ್ಟೆಲ್ಲಾ ಪ್ರಕರಣ ಆಗುವುದಕ್ಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ಟರು. ತನಿಖೆಗೆ ಕೊಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರು ಕೊಡುತ್ತಾರೆ? ಬೆಟ್ಟ ಅಗೆದರು ಅಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಅವರು ಮೊದಲು ಮಾತಾಡಿಲ್ಲ ಎಂದರು. ನಾನೇ ಮಾತಾಡಿದ್ದೇ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಎಂದರೆ ಬುರುಡೆ ತಂದು ಇದೇ ನಿಜ ಎಂದು ಮಾಡುವುದು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಮಾಸ್ಕ್ ಮ್ಯಾನ್ಗೆ ಆಮಿಷವೊಡ್ಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ನೋಡಿದರೆ ಪಾಪ ಅನ್ನಿಸುತ್ತೆ. ಇವರ ಹಿಂದೆ ಯಾರು ಇದ್ದಾರೆ ಎಂದು ತಿಳಿಯುವುದಕ್ಕೆ ಎಸ್ಐಟಿ ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರುವ ಮನಸ್ಸು ಇದ್ದರೆ ಎಸ್ಐಟಿ ತನಿಖೆ ಮಾಡಿ, ಎನ್ಐಎಗೆ ತನಿಖೆ ಕೊಡಿ. ಇವರು ಎನ್ಐಎಗೆ ಕೊಡಲಿಲ್ಲ ಎಂದರೆ ಕಾಂಗ್ರೆಸ್ ಪಾತ್ರ ಇದೆ ಎಂದುಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.
ಅನನ್ಯ ಭಟ್ ಕಳೆದು ಹೋಗಿದ್ದಾರೆ ಎಂದು ತನಿಖೆ ಮಾಡಿದರೆ ಗೊತ್ತಾಗುತ್ತಿತ್ತು, ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ದಾರೆ. ಕೇವಲ ಬುರುಡೆ ಹುಡುಕಿ ಎಂದು ಬಿಟ್ಟಿದ್ದರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರುವವರನ್ನು ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರುವವನು ಮಾಡಿರುವುದಾ? ಬೇರೆ ದೇಶದಲ್ಲಿ ಇರುವವನು ಮಾಡಿರುವುದೇ? ಎಂದು ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. ಎಸ್ಐಟಿ ಆಗಲಿ ಇಲ್ಲ. ಎನ್ಐಎ ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ ಎನ್ಐಎಗೆ ಕೊಟ್ಟು ಬಿಡಲಿ ಎಂದಿದ್ದಾರೆ.
ಸಮೀರ್ ಏಕಾಏಕಿ ಹೇಗೆ ಬಂದ? ಧರ್ಮಸ್ಥಳದ ಬಗ್ಗೆ ಹೇಗೆ ಮಾತಾಡುತ್ತಾನೆ. ಕಾಂಗ್ರೆಸ್ ಸರ್ಕಾರ ತಾಳಮೇಳ ಹೊಡೆದುಕೊಂಡು ಬಂದರು. ಈಗ ಸರ್ಕಾರಕ್ಕೆ ಮಂಗಳಾರತಿ ಆಯಿತು ಎಂದು ಟೀಕಿಸಿದ್ದಾರೆ.