ದಾವಣಗೆರೆ: ವ್ಯಕ್ತಿಯೊಬ್ಬ ಕರಡಿ ಕೈಯಲ್ಲಿ ಜಸ್ಟ್ ಮಿಸ್ ಆಗಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೊನ್ನಾಳಿ ಪಟ್ಟಣದ ಪಕ್ಕದ ಗುಡ್ಡದಿಂದ ನೀರು ಕುಡಿಯಲು ತುಂಗಭದ್ರ ತಟಕ್ಕೆ ಕರಡಿ ಬಂದಿದೆ. ಈ ವೇಳೆ ಗೊತ್ತಿಲ್ಲದೆ ಪಟ್ಟಣಕ್ಕೆ ಕರಡಿ ಎಂಟ್ರಿ ಕೊಟ್ಟಿದೆ.
ಈ ವೇಳೆ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಕರಡಿ ಬೆನ್ನಟ್ಟಿದೆ. ಕರಡಿ ಕಂಡು ಜೀವ ಉಳಿಸಿಕೊಳ್ಳುವುದಕ್ಕಾಗಿ ವ್ಯಕ್ತಿ ಓಡೋ ಹೋಗಿದ್ದಾರೆ. ಕರಡಿಯು ವ್ಯಕ್ತಿಯನ್ನು ಬೆನ್ನಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರಡಿ ಪಟ್ಟಣದ ತುಂಬಾ ಓಡಾಡಿರುವ ದೃಶ್ಯವನ್ನು ವ್ಯಕ್ತಿಗಳು ಸೆರೆ ಹಿಡಿದಿವೆ. ಕರಡಿ ಓಡಾಟದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಕರಡಿ ಹಿಡಿಯುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.