ಧಾರವಾಡ : ಜನಿವಾರ್ ಕಟ್ ಮಾಡಿ ಸಿಇಟಿ ಪರೀಕ್ಷೆಗೆ ಹಾಜರಾಗದಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಬೀದರ್ ಜಿಲ್ಲೆಯಲ್ಲಿ ಮಾತ್ರ ನಡೆದಿಲ್ಲ. ನಂತರ ಕೆಲವು ಜಿಲ್ಲೆಗಳಲ್ಲೂ ನಡೆದಿದೆ. ಧಾರವಾಡದಲ್ಲಿ ಕೂಡ ಇಂತಹ ಘಟನೆ ನಡೆದಿದೆ. ನಂದನ್ ಎಂಬ ವಿದ್ಯಾರ್ಥಿ ಪರೀಕ್ಷೆಗೆ ಹೋದಾಗ ಜನಿವಾರ ಕಟ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಜನಿವಾರ್ ಕತ್ತರಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ನಮ್ಮ ಪಾಲಿಕೆ ಸದಸ್ಯ ಆನಂದ ಯಾವಗಲ್ ಎಂಬ ಲಿಂಗಾಯತ ಸಮಾಜದವರ ಮಗಳ ಶಿವದಾರ ಕತ್ತರಿಸಿದ್ದಾರೆ. ಅದನ್ನು ಕತ್ತರಿಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ.
ಈ ಘಟನೆ ಎಲ್ಲೊ ಒಂದು ಕಡೆ ಆಗಿದ್ದಲ್ಲ. ಇಡೀ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡಿದ್ದಾರೆ. ಇದಕ್ಕೆ ಸಿಎಂ ನೇರ ಹೊಣೆ. ಅನಾವಶ್ಯಕವಾಗಿ ಮುಸ್ಲಿಂರಿಗೆ ತಲೆ ಮೇಲೆ ಎತ್ತಿ ಕೂಡಿಸಿಕೊಂಡಿದ್ದಾರೆ. ಈ ಪ್ರಸಾರವನ್ನು ಸಿಎಂ ಅವರ ಬೆಂಬಲಿಗರು ಎಲ್ಲ ಕಡೆ ಮಾಡುತ್ತಿದ್ದಾರೆ. ನಾಲ್ಕು ದಿನ ಕಳೆದರೂ ಸಿಎಂ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಸಿಎಂ ಈ ಪ್ರಕಣವನ್ನು ಖಂಡಿಸಿಲ್ಲ. ಇಂತಹ ಕೆಲಸ ಮಾಡಿದ ಹಿರಿಯ ಅಧಿಕಾರಿಗಳ ತಲೆ ದಂಡ ಮಾಡಿಲ್ಲ. ಇದರ ಅರ್ಥ ಇದು ಎಲ್ಲ ಸರಿ ಇದೆ ಎಂಬ ಕಲ್ಪನೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಇಡಿ ರಾಜ್ಯಾದ್ಯಂತ ಕೇವಲ ಬ್ರಾಹ್ಮಣ ಸಮಾಜದವರು ಮಾತ್ರ ಜನಿವಾರ ಹಾಕಲ್ಲ. ಹಿಂದೂ ಸಮಾಜದ ಬಹು ಮುಖ್ಯ ಜಾತಿಗಳ ಜನರು ಜನಿವಾರ ಹಾಕುತ್ತಾರೆ. ಅದೇ ರೀತಿ ಶಿವದಾರಕ್ಕೂ ಕತ್ತರಿ ಹಾಕಿದ್ದಾರೆ. ಒಕ್ಕಲಿಗ ಸಮಾಜ ಹಾಗೂ ಲಿಂಗಾಯತ ಸಮಾಜದವರೂ ಹಾಕುತ್ತಾರೆ. ಹೀಗಾಗಿ ಸರ್ಕಾರಕ್ಕೆ ಜನ ಧಿಕ್ಕಾರ ಹಾಕುತ್ತಿದ್ದಾರೆ. ಸಿಎಂ ಅವರು ಕಾರಣಿಭೂತರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
ಈ ಸರ್ಕಾರಕ್ಕೆ ಕೇವಲ ಮುಸ್ಲಿಂ ಅಷ್ಟೇ ಮತ ಹಾಕಿಲ್ಲ. ರಾಜ್ಯದಲ್ಲಿ ನಿಮಗೆ ಎಲ್ಲರೂ ಮತ ಹಾಕಿದ್ದಾರೆ. ನೀವು ಎಲ್ಲ ಸಮಾಜದ ಸಿಎಂ. ಅದೇ ರೀತಿ ಸಿಎಂ ನಡೆದುಕೊಳ್ಳಬೇಕು. ನಿಮ್ಮ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನ ಹಿಡಿದುಕೊಂಡು ಓಡಾಡುತ್ತಾರೆ. ಧರ್ಮ ಪಾಲನೆಗೆ ರಕ್ಷಣೆ ಇದೆ. ರಕ್ಷಣೆ ಕೊಡಿ. ಸರಿಯಾದ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತನ್ನಿ. ಧಾರವಾಡದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದ್ದಾರೆ.